ಬೆಂಗಳೂರು, ಏ 21 (DaijiworldNews/DB): ಪ್ರೊ. ನಂಜುಂಡ ಸ್ವಾಮಿ ಅವರೇ ನನ್ನ ರಾಜಕೀಯ ಗುರುಗಳು. ಅವರ ಪ್ರಭಾವದಿಂದ ನಾನು ರಾಜಕೀಯಕ್ಕೆ ಬರಲು ಕಾರಣವಾಯಿತು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಪ್ರೊ. ನಂಜುಂಡ ಸ್ವಾಮಿ ಅವರ ಪರಿಚಯದಿಂದ ನನಗೆ ರಾಜಕೀಯ ಆಪ್ತವಾಗುತ್ತಾ ಹೋಯಿತರು. ಅಲ್ಲದೆ ಇಲ್ಲಿ ನಾನು ಸಾಧಿಸಿದ ಪ್ರತಿಯೊಂದರಲ್ಲೂ ಅವರ ಪಾಲಿದೆ. ಅವರೊಬ್ಬ ಅಪ್ಪಟ ಸಮಾಜವಾದಿಯಾಗಿದ್ದರು. ಅವರ ಜೊತೆ ಒಡನಾಡುತ್ತಾ ರಾಜಕೀಯ, ಸಮಾಜವಾದದ ಬಗ್ಗೆ ತಿಳಿದುಕೊಳ್ಳುತ್ತಾ ಹೋದೆ. ಅದೇ ಮುಂದೆ ನನ್ನ ಜೀವನದಲ್ಲಿ ಮಹತ್ವದ ತಿರುವು ಪಡೆಯಲು ಕಾರಣವಾಯಿತು ಎಂದರು.
ಅವರೆಂದೂ ಇತರರ ಅಭಿಪ್ರಾಯಗಳಿಗೆ ಮನ್ನಣೆ ನೀಡುತ್ತಿರಲಿಲ್ಲ. ಚುನಾವಣೆಗೆ ನಿಲ್ಲಬೇಕೆಂದಾಗ ನಯವಾಗಿಯೇ ತಿರಸ್ಕರಿಸಿದ್ದರು. ವಿಶ್ವದ ರಾಜಕೀಯದ ಸಮಗ್ರ ಜ್ಞಾನ ಅವರಲ್ಲಿತ್ತು. ಇಂಧಿರಾಗಾಂಧಿಯಬರನ್ನು ಅವರು ಟೀಕಿಸುತ್ತಿದ್ದರು ಎಂದು ಸಿದ್ದರಾಮಯ್ಯ ಈ ವೇಳೆ ಸ್ಮರಿಸಿಕೊಂಡರು.