ಬೆಂಗಳೂರು, ಏ 14 (DaijiworldNews/DB): ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ನನ್ನ ಸಿಡಿ ತಯಾರಿಸಿದ ಮಹಾನಾಯಕನ ಕೈವಾಡವಿದೆ ಎಂದು ಹೇಳಿಕೆ ನೀಡಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಮಹಾನಾಯಕ ಮತ್ತು ಆತನ ತಂಡದ ಕೈವಾಡವಿದೆ. ಇದೇ ಮಹಾನಾಯಕ ಮತ್ತು ತಂಡ ಕುತಂತ್ರ ಮಾಡಿ ನನ್ನ ಸಿಡಿ ತಯಾರಿಸಿದ್ದರು. ಇನ್ನೂ ಹಲವಾರು ರೀತಿಯ ಕುತಂತ್ರಗಳನ್ನು ಅವರು ನಡೆಸುತ್ತಿದ್ದು, ಈ ಬಗ್ಗೆ ನನ್ನ ಬಳಿ ದಾಖಲೆ ಇದೆ. ವರಿಷ್ಠರು ಒಪ್ಪಿಗೆ ಕೊಟ್ಟಲ್ಲಿ ಈ ಎಲ್ಲಾ ದಾಖಲೆಗಳನ್ನು ಸೋಮವಾರ ಬಿಡುಗಡೆಗೊಳಿಸುತ್ತೇನೆ ಎಂದು ಗುರುವಾರ ಮಧ್ಯಾಹ್ನ ರಮೇಶ್ ಜಾರಕಿಹೊಳಿ ಹೇಳಿದ್ದರು.
ಇದಕ್ಕೆ ತಿರುಗೇಟು ನೀಡಿರುವ ಡಿ.ಕೆ. ಶಿವಕುಮಾರ್, ರಮೇಶ್ ಜಾರಕಿಹೊಳಿ ಏನು ಬೇಕಾದರೂ ಬಿಚ್ಚಿಡಲಿ, ಬಿಚ್ಚಿಟ್ಟಿರುವುದನ್ನೆಲ್ಲ ಜನ ನೋಡಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.