ಬೆಂಗಳೂರು, ಏ 07 (DaijiworldNews/HR): ಬಿಜೆಪಿ ಎಂಬ ಡ್ರಾಮಾ ಕಂಪನಿಯಲ್ಲಿ ಒಬ್ಬೊಬ್ಬರದ್ದೂ ಒಂದೊಂದು ವೇಷ. ಒಬ್ಬರು ತೊಟ್ಟಿಲು ತೂಗುತ್ತಾರೆ, ಮತ್ತೊಬ್ಬರು ಚಿವುಟುತ್ತಾರೆ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, ರಾಜ್ಯದಲ್ಲಿ ಕೋಮು ದ್ವೇಷ ಸ್ಥಾಪಿಸುತ್ತಿರುವ ಬಿಜೆಪಿ ನಾಯಕರು ಇದೇ ಸಂದರ್ಭವನ್ನು ತಮ್ಮೊಳಗಿನ ಕಿತ್ತಾಟಕ್ಕೂ ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದೆ.
ಇನ್ನು ಕಾಲೆಳೆಯುವ ಹೇಳಿಕೆಗಳಿಗೆ ರಾಷ್ಟ್ರವ್ಯಾಪಿ ಹೆಸರುವಾಸಿಯಾದ ಈಶ್ವರಪ್ಪ ಅವರು ಭಾರತದ ಕಲ್ಪನೆಯನ್ನು ಅವಮಾನಿಸುವ ಮೊದಲು ಎರಡು ಬಾರಿ ಯೋಚಿಸಲಿಲ್ಲ. ನಮ್ಮ ರಾಷ್ಟ್ರಧ್ವಜವನ್ನು ಕೇಸರಿಗೆ ಬದಲಾಯಿಸಬೇಕೆಂದು ಒತ್ತಾಯಿಸಿದರು, ನಾಜಿ ಮಂತ್ರಿ ಜೋಸೆಫ್ ಗೊಬೆಲ್ಸ್ ಹೆಮ್ಮೆಪಡುವಂತೆ ಮಾಡಿರುವ ಅರಗ ಜ್ಞಾನೇಂದ್ರ ಅವರು ಪ್ರತಿಯೊಂದು ವಿಷಯಕ್ಕೆ ಧಾರ್ಮಿಕ ಲೇಪನ ನೀಡಲು ಮತ್ತು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದೆ.
ಜಾತ್ಯತೀತತೆಯ ಕಲ್ಪನೆಯೇ ಈ ಬಿಜೆಪಿ ನಾಯಕನಿಗೆ ಕೋಪ ತರಿಸುತ್ತದೆ. ಏಕತೆ ಮತ್ತು ವೈವಿಧ್ಯತೆಯ ಯಾವುದೇ ಚರ್ಚೆ ನಡೆಯುತ್ತಿದರೂ ಅಲ್ಲಿ ಹಿಂಸೆಯನ್ನು ಪ್ರಚೋದಿಸುವ ಮಾತುಗಳನ್ನಾಡುವುದರಲ್ಲಿ ನಳಿನ್ ಕುಮಾರ್ ಕಟೀಲ್ ನಿಸ್ಸೀಮರು ಎಂದು ಟೀಕಿಸಿದೆ.