ಶಿವಮೊಗ್ಗ, ಮಾ 26 (DaijiworldNews/HR): ಹಿಜಾಬ್ ವಿಚಾರವಾಗಿ ಕಾಂಗ್ರೆಸ್ ನಾಯಕರು ಬಿಜೆಪಿ ವಿರುದ್ಧ ಹುಚ್ಚುನಾಯಿಯಂತೆ ಕೂಗುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ಧರಾಮಯ್ಯನವರು ಕಾಂಗ್ರೆಸ್ ಪಕ್ಷವನ್ನು ನಿರ್ನಾಮ ಮಾಡೋದಕ್ಕಾಗಿಯೇ ಹೋಗಿದ್ದು, ಸ್ವಾಮೀಜಿಗಳ ವಿರುದ್ದವೇ ಹಿಜಾಬ್ ವಿಚಾರವಾಗಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಸಿದ್ಧರಾಮಯ್ಯ ಸ್ವಾಮೀಜಿಗಳ ತಲೆ ಮೇಲಿನ ಖಾವಿ ಬಟ್ಟೆಯನ್ನೇ ಪ್ರಶ್ನಿಸಿದ್ದು, ಸಿದ್ಧರಾಮಯ್ಯ ಅವರ ಈ ಹೇಳಿಕೆಯನ್ನು ಕಾಂಗ್ರೆಸ್ ನಾಯಕರು ಖಂಡಿಸ್ತಾ ಇಲ್ಲ. ಧೈರ್ಯ ಇದ್ದರೇ ಖಂಡಿಸಲಿ ಎಂದು ವಾಗ್ದಾಳಿ ನಡೆಸಿದ್ದಾರೆ.