ಪಂಜಾಬ್ , ಮಾ 22 (DaijiworldNews/HR): ಸ್ವಾತಂತ್ರ್ಯ ಹೋರಾಟಗಾರರಾದ ಭಗತ್ ಸಿಂಗ್, ಸುಖದೇವ್ ಥಾಪರ್ ಮತ್ತು ಶಿವರಾಮ ರಾಜಗುರು ಅವರಿಗೆ ಗೌರವ ಸಲ್ಲಿಸಲು ಮಾರ್ಚ್ 23 ರಂದು ಸಾರ್ವಜನಿಕ ರಜೆ ಘೋಷಿಸಿ ಶಹೀದ್ ದಿವಸ್(ಹುತಾತ್ಮರ ದಿನ) ಆಚರಿಸಲಾಗುತ್ತಿದೆ ಎಂದು ಆಮ್ ಆದ್ಮಿ ಸರ್ಕಾರದ ಮುಖ್ಯಮಂತ್ರಿ ಭಗವಂತ್ ಮಾನ್ ತಿಳಿಸಿದ್ದಾರೆ.
ಮೂರು ಯುವ ಸ್ವಾತಂತ್ರ್ಯ ಹೋರಾಟಗಾರರನ್ನು ಮಾರ್ಚ್ 23, 1931 ರಂದು ಪಾಕಿಸ್ತಾನದಲ್ಲಿರುವ ಲಾಹೋರ್ನಲ್ಲಿರುವ ಕೇಂದ್ರ ಕಾರಾಗೃಹದಲ್ಲಿ ಗಲ್ಲಿಗೇರಿಸಲಾಗಿದ್ದು, ಪ್ಂಜಾಬ್ ನಲ್ಲಿ ಮಾರ್ಚ್ 23 ರಂದು ಶಹೀದ್ ದಿವಸ್ (ಹುತಾತ್ಮರ ದಿನ) ಆಚರಿಸಿ ರಜಾ ಘೋಷಿಸಿದೆ.
ಶಹೀದ್ ಭಗತ್ ಸಿಂಗ್ ಅವರ ಸ್ಥಳೀಯ ಗ್ರಾಮವಾದ ಖಟ್ಕರ್ ಕಲಾನ್ಗೆ ಭೇಟಿ ನೀಡಿ ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸಲ್ಲಿಸುವಂತೆ ಮುಖ್ಯಮಂತ್ರಿ ಭಗವಂತ್ ಮಾನ್ ರಾಜ್ಯದ ಜನರನ್ನು ಒತ್ತಾಯಿಸಿದ್ದಾರೆ.
ಭಗವಂತ್ ಮನ್ ಅವರು ಮಾರ್ಚ್ 16 ರಂದು ಖಟ್ಕರ್ ಕಲಾಂನಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.