ಬೆಂಗಳೂರು, ಮಾ 19 (DaijiworldNews/DB): ರಾಜ್ಯ ಸರ್ಕಾರಕ್ಕೆ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾದ ಮೇಲೆ ಇರುವ ಆಸಕ್ತಿ ರಾಜ್ಯದ ಜನರ ಮೇಲಿಲ್ಲ ಎಂದು ಮಾಜಿ ಸಚಿವ, ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ಈ ಚಿತ್ರಕ್ಕೆ ರಾಜ್ಯ ಸರ್ಕಾರ ತೆರಿಗೆ ವಿನಾಯಿತಿ ನೀಡಿದೆ. ಇವರು ಈ ಚಿತ್ರದ ಮೇಲೆ ತೋರಿಸುವ ಆಸಕ್ತಿಯನ್ನ ರಾಜ್ಯದ ಜನತೆ ಮೇಲೆ ತೋರಿಸುತ್ತಿಲ್ಲ ಎಂದರು.
ಸ್ಪೀಕರ್ ಸಿನಿಮಾ ನೋಡಿ ಸದನದಲ್ಲೇ ಹೇಳುತ್ತಾರೆ. ಗಂಭೀರ ವಿಷಯಗಳ ಬಗ್ಗೆ ಚರ್ಚೆ ನಡೆಯಬೇಕಾದ ಸದನದಲ್ಲಿ ಸಿನಿಮಾ ನೋಡುವುದರ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದವರು ಇದೇ ವೇಳೆ ತಿಳಿಸಿದರು.