ನವದೆಹಲಿ, ಮಾ 16 (DaijiworldNews/MS): ಕಾಂಗ್ರೆಸ್ನಲ್ಲಿ ಸದ್ಯದ ಮಟ್ಟಿಗೆ ರೆಬಲ್ ನಾಯಕರು ಎಂದೇ ಗುರುತಿಸಿಕೊಂಡಿರುವ ಜಿ 23 ನಾಯಕ ಕಪಿಲ್ ಸಿಬಲ್ ಪಕ್ಷದ ನಾಯಕತ್ವವನ್ನು ಟೀಕಿಸಿದ ನಂತರ, ಕಾಂಗ್ರೆಸ್ನ ಮುಖಂಡರು ಅವರ ವಿರುದ್ದ ಹರಿಹಾಯ್ದಿದ್ದಾರೆ.
"ಕಾಂಗ್ರೆಸ್ ಪ್ರತಿ ಮನೆಯ ಕಾಂಗ್ರೆಸ್ ಆಗಿದೆ. ಆದರೆ ಕೆಲವರು ಅದನ್ನು 'ಭೋಜನ ಸವಿಯುವ ' ಮತ್ತು 'ಬಂಗಲೆ'ಯ ಕಾಂಗ್ರೆಸ್ ಮಾಡಲು ಬಯಸುತ್ತಾರೆ. ನಾಯಕತ್ವ ಮತ್ತು ಹೋರಾಟ ಏನು ಎಂದು ನೋಡಲು ಒಮ್ಮೆ ಉತ್ತರ ಪ್ರದೇಶಕ್ಕೆ ಬನ್ನಿ, ಕಾಂಗ್ರೆಸ್ನ ನಾಶದ ಬಗ್ಗೆ ಮಾತನಾಡುತ್ತಿದ್ದವರೆಲ್ಲ ಅಳಿಸಿ ಹೋಗಿದ್ದಾರೆ " ಎಂದು ಛತ್ತೀಸ್ಗಢದ ಮುಖ್ಯಮಂತ್ರಿ ಬಘೇಲ್ ಅವರು ಹಿಂದಿಯಲ್ಲಿ ಟ್ವೀಟ್ ಮಾಡಿ ಟೀಕಿಸಿದ್ದಾರೆ.
ನಾಯಕತ್ವವು ಕೋಗಿಲೆ ನಾಡಿನಲ್ಲಿದೆ. ನಮಗೆ 'ಸಬ್ ಕಿ ಕಾಂಗ್ರೆಸ್' ಬೇಕು. ಆದರೆ ಕೆಲವರಿಗೆ 'ಘರ್ ಕಿ ಕಾಂಗ್ರೆಸ್' ಬೇಕು ಎಂದು ಸಂದರ್ಶನವೊಂದರಲ್ಲಿ ಕಪಿಲ್ ಸಿಬಲ್ ಹೇಳಿಕೆ ನೀಡಿದ್ದರು. ಆ ಬಳಿಕ ಅವರ ವಿರುದ್ದ ಟೀಕೆಗಳು ಕೇಳಿಬಂದಿದೆ.
ಇನ್ನು ಸಿಬಲ್ ಅವರು ಬಿಜೆಪಿ ಮತ್ತು ಆರ್ಎಸ್ಎಸ್ನವರ ರೀತಿಯಲ್ಲಿ ಮಾತನಾಡುತ್ತಿದ್ದಾರೆ ಎಂದು ಲೋಕಸಭೆಯಲ್ಲಿ ಕಾಂಗ್ರೆಸ್ ಮುಖ್ಯ ಸಚೇತಕ ಮಣಿಕಮ್ ಠಾಗೋರ್ ಆರೋಪಿಸಿದ್ದಾರೆ. ಕಾಂಗ್ರೆಸ್ನ ನಾಯಕತ್ವದ ಸ್ಥಾನದಲ್ಲಿ ಗಾಂಧಿ ಕುಟುಂಬದವರು ಇರಬಾರದು ಎಂಬುದು ಆರ್ಎಸ್ಎಸ್ ಮತ್ತು ಬಿಜೆಪಿಯ ಬಯಕೆಯಾಗಿದೆ. ಕಾಂಗ್ರೆಸ್ ಪಕ್ಷ ಮತ್ತು ಭಾರತ ಎಂಬ ಪರಿಕಲ್ಪನೆಯನ್ನು ನಾಶ ಮಾಡಲು ಅದು ಅಗತ್ಯವಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ನಿಷ್ಠರಾಗಿರುವ ಠಾಗೋರ್ ಆರೋಪಿಸಿದ್ದರು.