ಬೆಂಗಳೂರು, ಮಾ 15 (DaijiworldNews/DB): ಹಿಜಾಬ್ ವಿಚಾರವಾಗಿ ಕಾಂಗ್ರೆಸ್ ಪಕ್ಷವು ಕೆಲವು ವಿದ್ಯಾರ್ಥಿಗಳಿಗೆ ಕಾನೂನಿನ ನೆರವು ನೀಡಲು ಮುಂದಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ ಆರೋಪಿಸಿದ್ದಾರೆ.
ಟ್ವೀಟರ್ ಮುಖಾಂತರ ಆರೋಪ ವ್ಯಕ್ತಪಡಿಸಿದ ಅವರು, ಕಾಂಗ್ರೆಸ್ ಹಿಜಾಬ್ ವಿಷಯವಾಗಿ ವಿದ್ಯಾರ್ಥಿಗಳಿಗೆ ಬೆಂಬಲ ನೀಡುತ್ತಿದೆ. ಅಲ್ಲದೆ, ಕಾನೂನಿನ ನೆರವೂ ನೀಡಲು ಮುಂದೆ ಬಂದಿರುವುದು ಗೊತ್ತಾಗಿದೆ ಎಂದು ಬರೆದುಕೊಂಡಿದ್ದಾರೆ.
ಅಲ್ಲದೆ, ಇದೇ ವೇಳೆ ಈ ಪ್ರಯತ್ನದ ಶೇ. 1ರಷ್ಟನ್ನಾದರೂ 1980 ಮತ್ತು 1990ರ ದಶಕದಲ್ಲಿಆ ಪಕ್ಷ ಮಾಡಿದ್ದರೆ ಕಾಶ್ಮೀರಿ ಪಂಡಿತರು ತಮ್ಮ ತಾಯ್ನಾಡಿನಿಂದ ಹೊರದೂಡಲ್ಪಡುತ್ತಿರಲಿಲ್ಲ ಎಂದೂ ಬರೆದುಕೊಂಡಿದ್ದಾರೆ.