ಉತ್ತರಾಖಂಡ, ಮಾ 11 (DaijiworldNews/HR): ಉತ್ತರಾಖಂಡದಲ್ಲಿ ಬಿಜೆಪಿ ದೊಡ್ಡ ಗೆಲುವು ದಾಖಲಿಸಿದ ಬಳಿಕ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಮಿ ಅವರು ತಮ್ಮ ಮತ್ತು ತಮ್ಮ ಸಚಿವ ಸಂಪುಟದ ರಾಜೀನಾಮೆಯನ್ನ ರಾಜ್ಯಪಾಲ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಗುರ್ಮಿತ್ ಸಿಂಗ್ ಅವರಿಗೆ ಹಸ್ತಾಂತರಿಸಿದ್ದಾರೆ.
ಈ ಕುರಿತು ಮಾತನಾಡಿದ ಧಮಿ, 'ನಮಗೆ ಹೊಸ ಜನಾದೇಶ ದೊರೆತಿರುವುದರಿಂದ ಮತ್ತು ನಮ್ಮ ಅಧಿಕಾರಾವಧಿ ಪೂರ್ಣಗೊಂಡಿರುವುದರಿಂದ ನಾವು ರಾಜ್ಯಪಾಲರಿಗೆ ರಾಜೀನಾಮೆಯನ್ನ ನೀಡಿದ್ದೇವೆ. ಆದರೆ ಹೊಸ ಸರ್ಕಾರ ಪ್ರಮಾಣವಚನ ಸ್ವೀಕರಿಸುವವರೆಗೂ ಮುಂದುವರಿಯುವಂತೆ ನನ್ನನ್ನ ಕೇಳಲಾಗಿದೆ ಎಂದರು.
ಇನ್ನು ಪುಷ್ಕರ್ ಸಿಂಗ್ ಧಮಿ ಅವರ ಸಂಪುಟ ಸಹೋದ್ಯೋಗಿಗಳಾದ ಸಾತ್ಪಾಲ್ ಮಹಾರಾಜ್, ಗಣೇಶ್ ಜೋಶಿ ಮತ್ತು ಸ್ವಾಮಿ ಯತೀಶ್ವರಾನಂದ್ ಕೂಡ ಈ ಸಮಯದಲ್ಲಿ ಅವರೊಂದಿಗಿದ್ದರು ಎನ್ನಲಾಗಿದೆ.