ಕೋಲ್ಕತ್ತಾ, ಮಾ 11 (DaijiworldNews/DB): ಕಾಂಗ್ರೆಸ್ ಪಕ್ಷವು ಬಯಸಿದ್ದಲ್ಲಿ 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯೇತರ ಪಕ್ಷಗಳು ಒಟ್ಟಾಗಿ ಕೆಲಸ ಮಾಡಬಹುದು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಸದ್ಯ ನಾವೆಲ್ಲರೂ ಆಶಾವಾದಿಗಳಾಗಿ ಇರಬೇಕು. 2024ರ ಚುನಾವಣೆಯ ಭವಿಷ್ಯವನ್ನು 2022ರ ಚುನಾವಣೆ ನಿರ್ಧರಿಸುತ್ತದೆ ಎಂಬುದು ವಾಸ್ತವಕ್ಕೆ ದೂರವಾದುದಾಗಿದೆ. ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆ ಬಿಜೆಪಿಗೆ ನಷ್ಟವಾಗಿ ಪರಿಣಮಿಸಲಿದೆ ಎಂದವರು ಹೇಳಿರುವುದಾಗಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.