ಬೆಂಗಳೂರು, ಮಾ 11 (DaijiworldNews/DB): ಪಂಚರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಮತ್ತುಎಎಪಿ ಸಾದನೆಗೆ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರ ಪತ್ನಿ ಟಬು ರಾವ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅಲ್ಲದೇ ವ್ಯವಸ್ಥೆ ಬದಲಾಗದ ಹೊರತು ಬದಲಾವಣೆ ಅಸಾಧ್ಯ ಎಂದೂ ಹೇಳಿದ್ದಾರೆ.
ಫಲಿತಾಂಶದ ಬಳಿಕ ಟ್ವೀಟ್ ಮಾಡಿರುವ ಅವರು, ಬಿಜೆಪಿ ಎಲ್ಲವನ್ನೂ ಧೂಳೀಪಟ ಮಾಡಿದೆ. ಆಮ್ ಆದ್ಮಿಯದ್ದೂ ಅಸಾಧಾರಣ ಗೆಲುವು. ಕಾಂಗ್ರೆಸ್ ಕೂಡಾ ಉತ್ತಮ ಸಾಧನೆ ತೋರಿದೆ. ವ್ಯವಸ್ಥೆ ಬದಲಾವಣೆ ಅಗತ್ಯವಾಗಿ ಬೇಕಾಗಿದೆ. ಇಲ್ಲವಾದಲ್ಲಿ ಬದಲಾವಣೆಗಳನ್ನು ನಿರೀಕ್ಷಿಸುವುದು ಸಾಧ್ಯವಿಲ್ಲ ಎಂದಿದ್ದಾರೆ.