ನವದೆಹಲಿ, ಮಾ 11 (DaijiworldNews/HR): ಉತ್ತರ ಪ್ರದೇಶ, ಪಂಜಾಬ್, ಮಣಿಪುರ, ಗೋವಾ, ಉತ್ತರ ಖಾಂಡ್ ಚುನಾವಣಾ ಫಲಿತಾಂಶ 2024ರ ಲೋಕಸಭಾ ಚುನಾವಣೆಯ ದಿಕ್ಸೂಚಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದು, ಈ ಹೇಳಿಯ ವಿರುದ್ಧ ಪ್ರಶಾಂತ್ ಕಿಶೋರ್ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಪ್ರಶಾಂತ್ ಕಿಶೋರ್, ದೇಶಕ್ಕಾಗಿ ನಡೆಯುವ ಯುದ್ಧದಲ್ಲಿ ಹೋರಾಟವಿರಲಿದೆ. ಇದು 2024ರಲ್ಲಿ ನಿರ್ಧಾರವಾಗಲಿದೆ. ಯಾವುದೇ ರಾಜ್ಯದ ಚುನಾವಣೆ ಅಲ್ಲ. ಸಾಹೇಬ್ ನೆನಪಿರಲಿ. ಆದ್ದರಿಂದ ಪ್ರತಿಪಕ್ಷಗಳ ಮೇಲೆ ನಿರ್ಣಾಯಕ ಮಾನಸಿಕ ಪ್ರಯೋಜನವನ್ನು ಸ್ಥಾಪಿಸಲು ರಾಜ್ಯದ ಫಲಿತಾಂಶಗಳ ಸುತ್ತ ಉನ್ಮಾದವನ್ನು ಸೃಷ್ಟಿಸುವ ಈ ಬುದ್ಧಿವಂತ ಪ್ರಯತ್ನಕ್ಕೆ ಬೀಳಬೇಡಿ ಎಂದು ಹೇಳಿದ್ದಾರೆ.
ಇನ್ನು ಪಂಚ ರಾಜ್ಯಗಳ ಚುನಾವಣೆಯಲ್ಲಿ ಪಂಜಾಬ್ ಹೊರತುಪಡಿಸಿ ಉಳಿದ ರಾಜ್ಯಗಳಲ್ಲಿ ಬಿಜೆಪಿ ಗೆದ್ದ ಹಿನ್ನೆಲೆಯಲ್ಲಿ ಇದು 2024ರ ಲೋಕಸಭಾ ಚುನಾವಣೆಯ ದಿಕ್ಸೂಚಿಯಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಹೇಳಿಕೆ ನೀಡಿದ್ದರು.