ವಿಧಾನಸಭೆ, ಮಾ 11 (DaijiworldNews/HR): ರಾಜಕಾರಣಿಗಳು ಲಂಚ ತಿನ್ನುವುದನ್ನು ಕಡಿಮೆ ಮಾಡಿದರೆ ಮಾತ್ರ ರಾಜ್ಯದ ಸಾಲದ ಹೊರೆ ಕಡಿಮೆಯಾಗಲು ಸಾದ್ಯವಾಗುತ್ತದೆಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಚುನಾವಣೆ ಬಂದ ಸಂದರ್ಭ ಜನಪ್ರಿಯ ಬಜೆಟ್ ಕೊಡುವುದು ಸಾಮಾನ್ಯವಾಗಿದೆ. ಜನಪ್ರಿಯ ಬಜೆಟ್ ಕೊಟ್ಟವರು ಜಯಗಳಿಸಿದ್ದು ಯಾರೂ ಇಲ್ಲ. ರಾಜಕಾರಣಿಗಳು ಲಂಚ ತಿನ್ನುವುದು ಕಡಿಮೆ ಮಾಡಬೇಕು. ಆಗ ರಾಜ್ಯದ ಸಾಲ ಕಡಿಮೆ ಆಗುತ್ತದೆ ಎಂದರು.
ಇನ್ನು ಸಾವಿರಾರು ಕೋಟಿ ಲೂಟಿ ಮಾಡುವುದು.ದೊಡ್ಡ ದೊಡ್ಡ ಮನೆ ಕಟ್ಟುವುದು. ಐಷಾರಾಮಿ ಜೀವನ ಮಾಡುವುದು. ಈ ವ್ಯವಸ್ಥೆಯಲ್ಲಿ ಕರ್ನಾಟಕ ಬಿಹಾರಕ್ಕಿಂತ ಕೆಟ್ಟ ಪರಿಸ್ಥಿಗೆ ಹೋಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿಯಾದವರು ಇಡೀ ರಾಜ್ಯದ ಸಿಎಂ ಆಗಿ ಕೆಲಸ ಮಾಡಬೇಕು. ಜಿಲ್ಲೆಗೆ ಸೀಮಿತವಾಗಿ ಕೆಲಸ ಮಾಡಬಾರದು. ನನ್ನ ಜಿಲ್ಲೆಗೆ ಎಲ್ಲಾ ಆಗಬೇಕು ಎಂದು ತಾರತಮ್ಯ ಮಾಡಬಾರದು ಎಂದು ಪರೋಕ್ಷವಾಗಿ ಮಾಜಿ ಸಿಎಂ ಯಡಿಯೂರಪ್ಪ ಅವರ ವಿರುದ್ಧ ಆರೋಪ ಮಾಡಿದ್ದಾರೆ.