ರಾಜಸ್ತಾನ, ಫೆ 20 (DaijiworldNews/HR): ಮದುವೆಗೆಂದು ಚೌತ್ ಕಾ ಬರ್ವಾಡದಿಂದ ಉಜ್ಜಯಿನಿಗೆ ಹೋಗುತ್ತಿದ್ದ ಕಾರೊಂದು ಚಂಬಲ್ ನದಿಗೆ ಬಿದ್ದ ಪರಿಣಾಮ ಒಂಬತ್ತು ಜನರು ಸಾವನ್ನಪ್ಪಿರುವ ಘಟನೆ ರಾಜಸ್ಥಾನದ ಕೋಟಾದಲ್ಲಿ ನಡೆದಿದೆ.
ಬಸ್ ಮತ್ತು ಕಾರು ಬರ್ವಾರಾ ಕಾ ಚೌತ್ನಿಂದ ಉಜ್ಜಯಿನಿಗೆ ಮದುವೆ ಕಾರ್ಯಕ್ರಮಕ್ಕೆ ಹೋಗುತ್ತಿದ್ದು, ಕಾರು ಟ್ರ್ಯಾಕ್ ತಪ್ಪಿ ಎಳೆತಕ್ಕೆ ಬಂದು ಅಲ್ಲಿ ಅಸಮತೋಲನಗೊಂಡು ನದಿಯಲ್ಲಿ ಬಿದ್ದ ಪರಿಣಾಮ ವರ ಸೇರಿದಂತೆ 9 ಜನರು ಸಾವನ್ನಪ್ಪಿದ್ದಾರೆ.
ಇನ್ನು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಕುಟುಂಬಕ್ಕೆ ಸಂತಾಪ ಸೂಚಿಸಿದ್ದು, ಕೋಟಾದಲ್ಲಿ ಮದುವೆ ಮೆರವಣಿಗೆಯ ಕಾರು ಚಂಬಲ್ ನದಿಗೆ ಬಿದ್ದು ವರ ಸೇರಿದಂತೆ ಒಂಬತ್ತು ಮಂದಿ ಮೃತಪಟ್ಟಿರುವುದು ಅತ್ಯಂತ ದುಃಖಕರ ಮತ್ತು ದುರದೃಷ್ಟಕರ ಎಂದಿದ್ದಾರೆ.