ನವದೆಹಲಿ, ಫೆ 20 (DaijiworldNews/MS): ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ವಿರುದ್ದ ನಡೆಸಿದ ವಾಗ್ದಾಳಿಗೆ ತಿರುಗೇಟು ನೀಡಿರುವ ಪ್ರಿಯಾಂಕಾ ಗಾಂಧಿ , " ನನ್ನತಾಯಿಯನ್ನು ಬಗ್ಗೆ ಹೀಗೆ ಹೇಳಬೇಡಿ. ಅವಳು ಹುತಾತ್ಮನ ವಿಧವೆಯಾಗಿದ್ದಾರೆ. ನನ್ನ ಅಮ್ಮ ತಮ್ಮ ಜೀವನವನ್ನ ದೇಶಕ್ಕಾಗಿ ಮುಡಿಪಿಟ್ಟಿದ್ದಾರೆ ಎಂದಿದ್ದಾರೆ.
ತಾಯಿ ಸೋನಿಯಾ ಗಾಂಧಿಯವರು ತಮ್ಮ ಪತಿ (ಮಾಜಿ ಪ್ರಧಾನಿ ರಾಜೀವ್ ಗಾಂಧಿ) ಹತ್ಯೆಯಾದಾಗ "ಅವರ ವಿರೂಪಗೊಳಿಸಿದ ದೇಹವನ್ನು ಮನೆಗೆ ತಂದಿರುವುದನ್ನು ನೋಡಿದ್ದಾರೆ . ಅವರ ಬಗ್ಗೆ ಅಂತಹ ಮಾತುಗಳನ್ನು ಹೇಳುವ ಅವಶ್ಯಕತೆ ಏನಿತ್ತು? ಅವರನ್ನು ಈ ಕೀಳು ಮಟ್ಟಕ್ಕೆ ಏಕೆ ಎಳೆಯಬೇಕು?" ಎಂದು ಪ್ರಶ್ನಿಸಿದ್ದಾರೆ
ಚುನಾವಣೆಗಳು ಮೌಲ್ಯಗಳು, ಸಿದ್ಧಾಂತಗಳು ಮತ್ತು ಸಮಸ್ಯೆಗಳ ಮೇಲೆ ಹೋರಾಡಬೇಕೇ ಹೊರತು ಇತರರನ್ನು ಅವಮಾನಿಸುವುದು ಅಥವಾ ಅಂತಹ ಕ್ಷುಲ್ಲಕ ವಿಚಾರಗಳನ್ನು ಮೇಲೆ ರಾಜಕೀಯ ಮಾಡೋದಲ್ಲ ಅಲ್ಲ ಎಂದು ಪ್ರಿಯಾಂಕಾ ಗಾಂಧಿ ಟೀಕಿಸಿದ್ದಾರೆ.
ಅಸ್ಸಾಂ ಮುಖ್ಯಮಂತ್ರಿ ರಾಹುಲ್ ಗಾಂಧಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದರು. ರಾಹುಲ್ ಗಾಂಧಿಯವರು ಪಾಕಿಸ್ತಾನದ ಭೂಪ್ರದೇಶದೊಳಗೆ ಸೇನೆಯ ಕಾರ್ಯಾಚರಣೆಯ ಪುರಾವೆ ಕೇಳಿದ್ದಕ್ಕಾಗಿ, ನೀವು ನಿಜವಾಗಿಯೂ ರಾಜೀವ್ ಗಾಂಧಿಯವರ ಮಗನೋ ಅಲ್ಲವೋ ಎಂಬುವುದಕ್ಕೆ ಪುರಾವೆ ಕೇಳಿದ್ದೇವೆಯೇ?ಸೈನಿಕರನ್ನು ಎಂದಿಗೂ ಅವಮಾನಿಸಬೇಡಿ ಎಂದು ರಾಹುಲ್ ವಿರುದ್ದ ಕಿಡಿಕಾರಿದ್ದರು.