ನವದೆಹಲಿ, ಫೆ.14 (DaijiworldNews/HR): 2019ರಲ್ಲಿ ನಡೆದ ಸರ್ಜಿಕಲ್ ಸ್ಟ್ರೈಕ್ ಪುರಾವೆ ಕೇಳಿರುವ ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರಾವ್ ಅವರಿಗೆ ನಮ್ಮ ವೀರ ಸೇನೆಯ ಸರ್ಜಿಕಲ್ ಸ್ಟ್ರೈಕ್ನ ವೀಡಿಯೊ ಪುರಾವೆ ಇಲ್ಲಿದೆ ನೋಡಿ ಎಂದು ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಅವರು ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.
ಸರ್ಜಿಕಲ್ ಸ್ಟ್ರೈಕ್ ಪುರಾವೆ ಕೇಳುವುದರಲ್ಲಿ ತಪ್ಪೇನಿಲ್ಲ, ನಾನು ಇಂದಿಗೂ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಪುರಾವೆ ಕೇಳುತ್ತಿದ್ದೇನೆ, 2019ರಲ್ಲಿ ನಡೆದ ಉರಿ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆಯು ಪಾಕಿಸ್ಥಾನದಲ್ಲಿ ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದು, ಅದರ ಸಂಪೂರ್ಣ ಕೀರ್ತಿ ಸೇನೆಗೆ ಸಲ್ಲುತ್ತದೆ ಹೊರತು ಬಿಜೆಪಿಗಲ್ಲ ಎಂಬ ಚಂದ್ರಶೇಖರ್ ರಾವ್ ಹೇಳಿಕೆಗೆ ಅಸ್ಸಾಂ ಸಿಎಂ ಶರ್ಮಾ ಪ್ರತಿದಾಳಿ ನಡೆಸಿದ್ದು, ಈ ಮಾತು ಅವರ ಮನಸ್ಥಿತಿಯನ್ನು ಬಿಂಬಿಸುತ್ತದೆ. ಸೇನೆಯನ್ನು ಪ್ರಶ್ನಿಸುವುದೇ ದೊಡ್ಡ ಅಪರಾಧ ಎಂದಿದ್ದಾರೆ.
ಇನ್ನು ಶರ್ಮಾ ಅವರು ಕೂನಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದ್ದು, ಕೆಸಿಆರ್ ಅವರೇ ನಮ್ಮ ವೀರ ಸೇನೆಯ ಸರ್ಜಿಕಲ್ ಸ್ಟ್ರೈಕ್ನ ವೀಡಿಯೊಗ್ರಾಫಿಕ್ ಪುರಾವೆ ಇಲ್ಲಿದೆ. ನೀವು ನಮ್ಮ ಸಶಸ್ತ್ರ ಪಡೆಗಳ ಶೌರ್ಯವನ್ನು ಪ್ರಶ್ನಿಸುತ್ತೀರಿ ಮತ್ತು ಅವರನ್ನು ಅವಮಾನಿಸುತ್ತಿರುವುದು ಯಾಕೆ? ನವ ಭಾರತವು ನಮ್ಮ ಸೇನೆಯ ವಿರುದ್ಧದ ಅವಮಾನಗಳನ್ನು ಸಹಿಸುವುದಿಲ್ಲ ಎಂದಿದ್ದಾರೆ.
ಇತ್ತಿಚೇಗೆ ಸರ್ಜಿಕಲ್ ಸ್ಟ್ರೈಕ್ ಕುರಿತು ರಾಹುಲ್ ಗಾಂಧಿ ಪ್ರಶ್ನಿಸಿರುವುದಕ್ಕೆ ವಾಗ್ದಾಳಿ ನಡೆಸಿರುವ ಹಿಮಂತ ಬಿಸ್ವಾ ಶರ್ಮಾ, ಜನರಲ್ ಬಿಪಿನ್ ರಾವ್ ದೇಶದ ಹೆಮ್ಮೆ ಅವರ ನೇತೃತ್ವದಲ್ಲಿ ಭಾರತವು ಪಾಕಿಸ್ತಾನದ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸಿತು. ಇಂದು ರಾಹುಲ್ ಗಾಂಧಿ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಪುರಾವೆ ಕೇಳಿದ್ದಾರೆ. ರಾಹುಲ್ ಗಾಂಧಿ ರಾಜೀವ್ ಗಾಂಧಿ ಅವರ ಮಗ ಎಂಬುದಕ್ಕೆ ನಾವು ಇಂದಿನವರೆಗೂ ಪುರಾವೆ ಕೇಳಿದ್ದೇವೆಯೇ? ನನ್ನ ದೇಶದ ಸೇನೆಯಿಂದ ಪುರಾವೆ ಕೇಳುವ ಹಕ್ಕನ್ನು ಅವರಿಗೆ ಕೊಟ್ಟವರು ಯಾರು? ಎಂದಿದ್ದರು.
ಇನ್ನು ಈ ಹೇಳಿಕೆಯ ನಂತರ ಚಂದ್ರಶೇಖರ ರಾವ್ ಅವರು ಬಿಸ್ವಾ ಅವರನ್ನು ವಜಾಗೊಳಿಸುವಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಒತ್ತಾಯಿಸಿದ್ದರು.