ನವದೆಹಲಿ, ಫೆ 12 (DaijiworldNews/KP): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಲ್ಪನೆಯ ಭಾರತದಲ್ಲಿ ದೇಶದ ಈಶಾನ್ಯ ಭಾಗಕ್ಕೆ ಸ್ಥಾನವಿಲ್ಲ ಎಂದು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಆರೋಪಿಸಿದ್ದಾರೆ.
ಕಾಶ್ಮೀರದಿಂದ ಕೇರಳದವರೆಗೆ ಮತ್ತು ಗುಜರಾತ್ನಿಂದ ಪಶ್ಚಿಮ ಬಂಗಾಳದವರೆಗೆ ಭಾರತವು ಎಲ್ಲ ಬಣ್ಣಗಳಲ್ಲಿ ಸುಂದರವಾಗಿದೆ ಎಂಬ ರಾಹುಲ್ ಗಾಂಧಿ ಹೇಳಿಕೆಗೆ ಟ್ವೀಟ್ ಮೂಲಕ ತಿರುಗೇಟು ನೀಡಿದ ಅವರು, ರಾಹುಲ್ ಗಾಂಧಿ ಪ್ರಕಾರ ಭಾರತವು ಪಶ್ಚಿಮ ಬಂಗಾಳದಲ್ಲಿ ಅಂತ್ಯಗೊಳ್ಳುತ್ತದೆ. ಆದರೆ ನನ್ನ ಪ್ರಕಾರ ಸುಂದರವಾದ ಅರುಣಾಚಲ ಪ್ರದೇಶ ಸೇರಿದಂತೆ ದೇಶದ ಈಶಾನ್ಯ ಭಾಗವು ಭಾರತದ ಕಲ್ಪನೆಯ ಭಾಗವೇ ಎಂದು ಟ್ವೀಟ್ ಮಾಡಿದ್ದಾರೆ.
ಈ ಹಿಂದೆ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಮೊದಲ ಹಂತದ ಮತದಾನದ ವೇಳೆಯಲ್ಲಿ ಯೋಗಿ ಆದಿತ್ಯನಾಥ, ಮತದಾರರು ಎಚ್ಚರ ತಪ್ಪಿದ್ದಾರೆ, ಉತ್ತರ ಪ್ರದೇಶವನ್ನು ಇನ್ನೊಂದು ಕಾಶ್ಮೀರ, ಕೇರಳ ಅಥವಾ ಪಶ್ವಿಮ ಬಂಗಾಳವಾಗಿ ಬದಲಾಗುತ್ತಿದೆ, ಒಂದು ವೇಳೆ ಯುಪಿ ಕೇರಳವಾದರೆ ಇಲ್ಲಿ ಉತ್ತಮ ಶಿಕ್ಷಣ ಹಾಗೂ ವೈದ್ಯಕೀಯ ವ್ಯವಸ್ಥೆ ಒದಗಿಸುತ್ತೇವೆ ಎಂಬ ಹೇಳಿಕೆ ವಿವಾದಕ್ಕೆ ಎಡೆಮಾಡಿಕೊಟ್ಟಿತ್ತು.
ಆದ್ಯನಾಥ್ ಹೇಳಿಕೆಯ ವಿರುದ್ದ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ, ವೈವಿಧ್ಯಮಯ ಭಾರತವನ್ನು ಅವಮಾನಿಸಬೇಡಿ, ನಾವೆಲ್ಲರೂ ದೇಶದ ಶಕ್ತಿ, ಇದು ನಮ್ಮ ಸಂಸ್ಕೃತಿ, ವೈವಿಧ್ಯತೆ, ಭಾಷೆ, ಜನರೆಂಬ ಒಕ್ಕೂಟವನ್ನು ಅಳವಿಡಿಸಿಕೊಡಿದ್ದೇವೆ ಎಂದು ಹೇಳಿದ್ದರು.