ಬೆಂಗಳೂರು, ಫೆ 11 (DaijiworldNews/HR): ಮುಷ್ಕರದ ವೇಳೆ ವಜಾಗೊಂಡಿದ್ದಂತ ನೌಕರರನ್ನು ಮರು ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಸದ್ಯಕ್ಕೆ ಕೆಎಸ್ಆರ್ಟಿಸಿ ದರ ಹೆಚ್ಚಳ ಮಾಡುವುದಿಲ್ಲ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಬೆಲೆ ಏರಿಕೆಯಿಂದಾಗಿ ಸಾರಿಗೆ ನಿಗಮಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ನೌಕರರಿಗೆ ಸಂಬಳ ಕೂಡ ನೀಡಲಾಗದಷ್ಟು ಸಮಸ್ಯೆ ಎದುರಿಸುವಂತಾಗಿದೆ. ಇದರ ನಡುವೆಯೂ ವೋಲ್ವೋ ಪ್ರಯಾಣದರ ಇಳಿಕೆ ಮಾಡಲಾಗಿದ್ದು, ಕೆಎಸ್ಆರ್ಟಿಸಿ ಪ್ರಯಾಣದರ ಏರಿಕೆ ಮಾಡೋದಿಲ್ಲ ಎಂದಿದ್ದಾರೆ.
ಕೊರೊನಾ ಸಮಯದಲ್ಲಿ ಮುಷ್ಕರ ನಡೆಸಿ ವಜಾಗೊಂಡ ನೌಕರರನ್ನು ಮರಳಿ ನೇಮಕಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ. ಹೀಗಿದ್ದರೂ ಅವರ ಕುಟುಂಬದ ಮುಖವನ್ನು ನೋಡಿ ಮರುನೇಮಕ ಮಾಡಿಕೊಳ್ಳಲಾಗುತ್ತಿದೆ. ಇಂದು 100 ನೌಕರರನ್ನು ಮರುನೇಮಕ ಮಾಡಿಕೊಂಡಿದ್ದು, ನಾಳೆ 200 ನೌಕರರನ್ನು ಮರು ನೇಮಕಾತಿ ಮಾಡಿಕೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.
ಮುಷ್ಕರದಿಂದಾಗಿ 1,610 ನೌಕರರು ಭಾಗಿಯಾಗಿ ತೊಂದರೆ ಪಡುವಂತಾಗಿದ್ದು, ಮುಷ್ಕರ ನೇತೃತ್ವ ವಹಿಸಿಕೊಂಡವರು ಓಡಿ ಹೋಗಿದ್ದಾರೆ. ಆದ್ರೇ ಸರ್ಕಾರ ನಿಮ್ಮ ಜೊತೆಗಿದೆ ಎಂದು ಹೇಳಿದ್ದಾರೆ.