ಬೆಂಗಳೂರು, ಜ 25 (DaijiworldNews/KP):ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ವಿಚಾರದಲ್ಲಿ ನನಗೆ ಯಾವುದೇ ಅಸಮಾಧಾನವಿಲ್ಲ, ಹೈಕಮಾಂಡ್ ಏನು ಜವಾಬ್ದಾರಿ ನೀಡಿದರೂ ನಾನು ಸಮರ್ಥವಾಗಿ ನಿಭಾಯಿಸುತ್ತೆನೆ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂಟೆ ಹೋರುವ ವರು ಎಲ್ಲಿ ಬೇಕಾದರೂ ಹೋರಬಹುದು, ಹಾಗೇ ಒಳ್ಳೆ ಕೆಲಸ ಮಾಡುವವವರು ಯಾವ ಜಿಲ್ಲೆ ವಹಿಸಿದರು ತಮ್ಮ ಕರ್ತವ್ಯ ನಿಭಾಯಿಸುತ್ತಾನೆ. ಅಭಿವೃದ್ಧಿ ಕೆಲಸ ಮಾಡಬೇಕು ಎನ್ನುವವರಿಗೆ ಅಸಮಾಧಾನದ ಮಾತು ಬರುವುದಿಲ್ಲ, ಸಿಎಂ ಹೈಕಮಾಂಡ್ ಸೂಚನೆಯನ್ನು ಪಾಲಿಸುತ್ತಾರೆ ಎಂದು ಹೇಳಿದರು.
ನಾನು ಬೆಂಗಳೂರು ಜಿಲ್ಲೆ ಬೇಕೆಂದು ಕೇಳಿದ್ದೆ, ಆದರೆ ನನಗೆ ಚಾಮರಾಜನಗರ ಕೊಟ್ಟಿದ್ದಾರೆ. ರಾಷ್ಟ್ರೀಯ ನಾಯಕರು ಏನು ಜವಾಬ್ದಾರಿ ವಹಿಸಿದ್ದು ಅದನ್ನು ನಾನು ಮಾಡುತ್ತಿದ್ದೇನೆ.
ಹೈಕಮಾಂಡ್ ಸೂಚಿಸಿದಂತೆ ಸಿಎಂ ಬಸವರಾಜ್ ಬೊಮ್ಮಾಯಿ ಪಾಲಿಸುತ್ತಾರೆ. ಮಾಧ್ಯಮಗಳು ಈ ವಿಷಯಕ್ಕೆ ಉಪ್ಪು ಖಾರ ಹಾಕುವುದು ಬೇಡ, ಯಾವ ಸಚಿವರಿಗೂ ಅಸಮಾಧಾನವಿಲ್ಲ ಎಂದಿದ್ದಾರೆ.