ಬೆಂಗಳೂರು, ಜ. 19 (DaijiworldNews/SM): ರಾಜ್ಯದಲ್ಲಿ ಜಾರಿಯಲ್ಲಿರುವ ವೀಕೆಂಡ್ ಕರ್ಫ್ಯೂ ಬಗ್ಗೆ ಸಂಸದ ಪ್ರತಾಪ್ ಸಿಂಹ ಅಸಮಾಧಾನ ವ್ಯಕ್ತಪಡಿಸಿದ್ದು, ಕರ್ಫ್ಯೂ ಜಾರಿಗೊಳಿಸುವುದಾದರೆ, ಲಸಿಕೆ ಯಾಕೆ ನೀಡಬೇಕಿತ್ತು ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ರಾಜ್ಯದಲ್ಲಿ ಕೊರೊನಾ ಲಸಿಕೆ ನೀಡುವುದರಲ್ಲಿ ಸಫಲತೆ ಕಂಡಿದ್ದೇವೆ. ಮೊದಲ ಡೋಸ್, ಎರಡನೇ ಡೋಸ್ ಹಾಗೂ ಇದೀಗ ಬೂಸ್ಟರ್ ಡೋಸ್ ಬಂದಿದೆ. ಆಸ್ಪತ್ರೆ ವ್ಯವಸ್ಥೆ, ಆಕ್ಸಿಜನ್ ವ್ಯವಸ್ಥೆ ಎಲ್ಲವೂ ರಾಜ್ಯದಲ್ಲಿದೆ. ಎಲ್ಲಾ ವ್ಯವಸ್ಥೆಗಳಿರುವಾಗ ಮತ್ತೆ ಲಾಕ್ಡೌನ್ ಎಂದರೆ ಹೇಗೆ? ಲಾಕ್ಡೌನ್- ಕರ್ಫ್ಯೂ ವಿಧಿಸುವುದಾದರೆ ಮತ್ತೆ ಲಸಿಕೆ ಯಾಕೆ ಬೇಕು?
ಎಲ್ಲಾ ವ್ಯವಸ್ಥೆ ಇರುವಾಗ ಸುಮ್ಮನೆ ಅನಗತ್ಯವಾಗಿ ತೊಂದರೆಯಾಗುತ್ತಿದೆ. ಜನರ ಜೀವದ ಜೊತೆ ಜೀವನ ಕಾಪಾಡಬೇಕಾದ ಜವಬ್ದಾರಿ ಇದೆ. ಉತ್ತರಪ್ರದೇಶ, ಪಂಜಾಬ್, ಗೋವಾ, ಉತ್ತರಖಂಡ್ ಎಲ್ಲಾ ಕಡೆ ಚುನಾವಣೆ ನಡೆಯುತ್ತಿದೆ. ಚುನಾವಣೆಗಳಿಗೆ ಪೊಲಿಟಿಕಲ್ ರ್ಯಾಲಿ ಮಾಡುವುದಿಲ್ವಾ ನಾವು? ಸರ್ಕಾರದ ವಿರುದ್ಧ ಸಂಸದ ಪ್ರತಾಪ್ ಸಿಂಹ ಅಸಮಾಧಾನ ಹೊರಹಾಕಿದ್ದಾರೆ.