ತೆಲಂಗಾಣ, ಜ 18 (DaijiworldNews/HR): ಸೇನಾ ಕಾರ್ಯಾಚರಣೆಯಲ್ಲಿ ನಾಲ್ವರು ಉಗ್ರರನ್ನು ಸದೆಬಡಿರುವ ಘಟನೆ ತೆಲಂಗಾಣ-ಛತ್ತೀಸ್ಗಢ ರಾಜ್ಯದ ಗಡಿಯಲ್ಲಿ ನಡೆದಿದೆ.
ಈ ಕುರಿತು ಛತ್ತೀಸ್ ಗಢದ ಐಜಿ ಬಸ್ತಾರ್ ಪಿ ಸುಂದರರಾಜ್ ಮಾಹಿತಿ ನೀಡಿದ್ದು, ಸೇನೆ ಮತ್ತು ಉಗ್ರರ ನಡುವೆ ತೆಲಂಗಾಣ-ಛತ್ತೀಸ್ ಗಢದ ಗಡಿ ಪ್ರದೇಶದಲ್ಲಿ ಗುಂಡಿನ ಚಕಮಕಿ ನಡೆದಿದ್ದು, ಭದ್ರತಾ ಪಡೆಗಳು 4 ನಕ್ಸಲೀಯರನ್ನ ಹೊಡೆದುಳಿಸಿದ್ದಾರೆ ಎಂದರು.
ಇನ್ನು ಈ ಗುಂಡಿನ ಚಕಮಕಿಯಲ್ಲಿ ಗ್ರೇಹೌಂಡ್ಸ್ ಯೋಧರೊಬ್ಬರು ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ವಾರಂಗಲ್ʼಗೆ ಏರ್ ಲಿಫ್ಟ್ ಮಾಡಲಾಗಿದೆ. ಇನ್ನು ಶೋಧ ಕಾರ್ಯಚಾರಣೆ ಮುಂದುವರೆದಿದೆ ಎಂದು ತಿಳಿಸಿದ್ದಾರೆ.