ನವದೆಹಲಿ, ಅ 13 (DaijiworldNews/MS): 2016 ರಲ್ಲಿ ನಿಲಂಬೂರ್ ಅರಣ್ಯ ಪ್ರದೇಶದಲ್ಲಿ ಮಾವೋವಾದಿಗಳು ಆಯೋಜಿಸಿದ್ದ ತರಬೇತಿ ಶಿಬಿರಗಳಿಗೆ ಸಂಬಂಧಿಸಿದ ಎಡಕ್ಕರ ಮಾವೋವಾದಿ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಆ. 12ರ ಮಂಗಳವಾರ ಕೇರಳ, ಕರ್ನಾಟಕ ಮತ್ತು ತಮಿಳುನಾಡು ಸೇರಿ ಮೂರು ರಾಜ್ಯಗಳ 20 ಸ್ಥಳಗಳಲ್ಲಿ ಏಕಕಾಲದಲ್ಲಿ ಶೋಧ ನಡೆಸಿದೆ.
ಸಿಪಿಐ (ಮಾವೋವಾದಿ) ಸದಸ್ಯರ ಪಿತೂರಿಗೆ ಸಂಬಂಧಿಸಿದಂತೆ ಕೊಚ್ಚಿಯಲ್ಲಿ ಎನ್ಐಎ ದಾಖಲಿಸಿರುವ ಪ್ರಕರಣದಲ್ಲಿ ತಮಿಳುನಾಡಿನ ಹಲವಾರು ಮಾವೋವಾದಿಗಳ ಮೇಲೆ ಆರೋಪಗಳಾಗಿದ್ದಾರೆ.
ಎನ್ಐಎ ಹೇಳಿಕೆಯ ಪ್ರಕಾರ, ನಿಷೇಧಿತ ಭಯೋತ್ಪಾದಕ ಸಂಘಟನೆಯು ಸೆಪ್ಟೆಂಬರ್ 2016 ರ ಕೊನೆಯ ವಾರದಲ್ಲಿ ನಿಲಂಬೂರ್ ಅರಣ್ಯ ಪ್ರದೇಶದಲ್ಲಿ ಭಾರತದ ಏಕತೆ, ಸಮಗ್ರತೆ ಮತ್ತು ಭದ್ರತೆಗೆ ಬೆದರಿಕೆ ಒಡ್ಡುವ, ರಾಷ್ಟ್ರ ವಿರೋಧಿ ಚಟುವಟಿಕೆಗಳಲ್ಲಿ ತೊಡಗಲೆಂದು ತರಬೇತಿ ಶಿಬಿರ, ಶಸ್ತ್ರಾಸ್ತ್ರ ತರಬೇತಿ, ಧ್ವಜಾರೋಹಣ ಮತ್ತು ಸಿಪಿಐ (ಮಾವೋವಾದಿ) ರಚನೆಯ ದಿನಾಚರಣೆಯನ್ನು ನಡೆಸಿತ್ತು.
ಎನ್ಐಎ ಅಧಿಕಾರಿಗಳು ಮಂಗಳವಾರ ಬೆಳಿಗ್ಗೆಯಿಂದ ದಕ್ಷಿಣದ ಎಲ್ಲಾ ಮೂರು ರಾಜ್ಯಗಳ ಸ್ಥಳಗಳ ಮೇಲೆ ದಾಳಿ ನಡೆಸಿದ್ದಾರೆ. ಚೆನ್ನೈ, ಕೊಯಮತ್ತೂರು, ಥೇನಿ, ರಾಮನಾಥಪುರಂ, ಸೇಲಂ, ಕನ್ಯಾಕುಮಾರಿ ಮತ್ತು ಕೃಷ್ಣಗಿರಿ ಜಿಲ್ಲೆಗಳಲ್ಲಿ ಆರೋಪಿ ಮಾವೋವಾದಿಗಳ ತಮಿಳುನಾಡಿನ 12 ಆವರಣಗಳು ಅವುಗಳಲ್ಲಿ ಸೇರಿವೆ. ಕೇರಳದ ವಯನಾಡ್, ತ್ರಿಶೂರ್ ಮತ್ತು ಕಣ್ಣೂರು ಮೂರು ಸ್ಥಳಗಳಲ್ಲಿ ಮತ್ತು ಚಿಕ್ಕಮಗಳೂರು, ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಗಳ ಕರ್ನಾಟಕದ ಐದು ಸ್ಥಳಗಳಲ್ಲಿ ಶೋಧಗಳು ನಡೆದವು.
ಈ ಪ್ರಕರಣವನ್ನು ಮೂಲತಃ 2017 ರಲ್ಲಿ ಕೇರಳದ ಮಲಪ್ಪುರಂ ಜಿಲ್ಲೆಯ ಎಡಕ್ಕರ ಪೊಲೀಸ್ ಠಾಣೆಯಲ್ಲಿ ನೋಂದಾಯಿಸಲಾಗಿದೆ.