ಶಿರಸಿ, ಜು 08 (DaijiworldNews/MS): ಹಳ್ಳಿ ಹಳ್ಳಿಗೆ ಭೇಟಿ ಪಕ್ಷ ಸಂಘಟನೆಗೆ, ಕಾರ್ಯಕರ್ತರ ಸಂಘಟನೆ ಮಾಡಿದವರಿಗೆ ಮಾತ್ರ ಇನ್ನು ಮುಂದೆ ಟಿಕೆಟ್ ಅದು ಬಿಟ್ಟು, ನನ್ನ ಹಿಂದೆ, ಲೀಡರ್ ಗಳ ಹಿಂದೆ ಓಡಾಡಿದರೆ ಅಂಥವರ ಖೆಲ್ ಖತಂ ಎಂದು ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಶಿರಸಿಯಲ್ಲಿ ಮಾರಿಕಾಂಬಾ ದೇವಸ್ಥಾನದ ಬಳಿ ಸೈಕಲ್ ಜಾಥಾ ನಡೆಸಿ , ಕೇಂದ್ರ ರಾಜ್ಯ ಸರಕಾರ ಬೆಲೆ ಏರಿಕೆ ವಿರುದ್ದ ಮಾಡಿದ್ದನ್ನು ಖಂಡಿಸಿ ಪ್ರತಿಭಟನೆ ನಡೆಸಿ ಮಾತನಾಡಿದರು. ಯಾರು ಎಷ್ಟು ಜನರಿಗೆ ಸಹಾಯ ಮಾಡಿದ್ದಾರೆ, ಕೊವೀಡ್ ಸಂಕಷ್ಟದಲ್ಲಿ ಯಾರು ಎಷ್ಟು ಜನರಿಗೆ ನೆರವಾಗಿದ್ದಾರೆ, ಕಾರ್ಯಕರ್ತರ ಸಂಘಟನೆ ಮಾಡಿದ್ದಾರೆ ಇವೆಲ್ಲವೂಗಳ ಲೆಕ್ಕಾಚಾರಗಳನ್ನು ನೋಡುತ್ತೇವೆ. ಮುಖಂಡರ ಹಿಂದೆ ಇದ್ದವರಿಗೆ ಖಂಡಿತವಾಗಿಯೂ ಟಿಕೆಟ್ ಇಲ್ಲ. ಮನೆ ಮನೆ, ಹಳ್ಳಿ ಹಳ್ಳಿಗೆ ಭೇಟಿ ನೀಡಿದವರಿಗೆ ಮಾತ್ರ ಈ ಬಾರಿ ಆದ್ಯತೆ ನೀಡಲಾಗುವುದು ಎಂದು ಹೇಳಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರ ಜನರ ಜೇಬಿಗೆ ಕೈ ಹಾಕುತ್ತಿದೆ. ಕಾಂಗ್ರೆಸ್ ಈಗಾಗಲೇ ಸೈಕಲ್ ಜಾಥಾ ನಡೆಸಿ ರಾಜ್ಯದ, ಸಾಮಾನ್ಯ ಜನರ ಗಮನ ಸೆಳೆಯುವ ಪ್ರಯತ್ನ ಮಾಡಿದ್ದೇವೆ. ಇದು ಜನರು ಕಾಂಗ್ರೆಸ್ ಮೂಲಕ ಮಾಡಿದ ಪ್ರತಿಭಟನೆಯಾಗಿದೆ ಎಂದು ಹೇಳಿದರು
ಈ ವೇಳೆ ಮಾಜಿ ಸಚಿವ ಆರ್.ವಿ.ದೇಶಪಾಂಡೆ, ವಿ.ಪ.ಸದಸ್ಯ ಬಿ.ಕೆ.ಹರಿಪ್ರಸಾದ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.