ಬೆಂಗಳೂರು, ಜು 03 (DaijiworldNews/MS): ಕೇಂದ್ರ ಸಚಿವ ಸದಾನಂದಗೌಡ ಪತ್ರಿಕೆ, ಚಾನೆಲ್ ಗಳಲ್ಲಿ ಸುಳ್ಳು ಸುದ್ದಿ ಪ್ರಸಾರ ಮಾಡದಂತೆ, ನಕಲಿ ಸಿಡಿ ಸೃಷ್ಟಿಸಿ ಬಿಡುಗಡೆ ಮಾಡದಂತೆ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ನಲ್ಲಿ ಮಾಧ್ಯಮಗಳ ವಿರುದ್ಧ ತಡೆಯಾಜ್ಞೆ ತಂದಿದ್ದು ಈ ಬಗ್ಗೆ ಕಾಂಗ್ರೆಸ್ ವ್ಯಂಗ್ಯವಾಡಿದೆ. ಗಡಿಬಿಡಿಯಲ್ಲಿ ತಡೆಯಾಜ್ಞೆ ತಂದ ಸದಾನಂದಗೌಡರಿಗೆ ಮ್ಮ ಸಿಡಿ ಬಿಡುಗಡೆಯ ಕನಸು ಬಿದ್ದಿತ್ತೇ? ಎಂದು ವ್ಯಂಗ್ಯವಾಡಿದೆ.
ಸರಣಿ ಟ್ವೀಟ್ ಮಾಡಿ ಗೌಡರ ವಿರುದ್ದ ಕಾಂಗ್ರೆಸ್ ಕುಹಕವಾಡಿದ್ದು, " ಸಿಡಿ ಪಾರ್ಟಿ' ಬಿಜೆಪಿಯ ಸಚಿವ ಸುಧಾಕರ್ ಇತರರ ಪತ್ನಿಯರ ಲೆಕ್ಕ ಕೇಳಿದ್ದರಲ್ಲಿ ಆಶ್ಚರ್ಯವೇನೂ ಇಲ್ಲ! ಬಿಜೆಪಿಯವರ ಒಳಹುಳುಕುಗಳ ಬಗ್ಗೆ ಎಲ್ಲರಿಗಿಂತ ಬಿಜೆಪಿಯವರಿಗೆ ಚೆನ್ನಾಗಿ ಅರಿವಿರುವಂತಿದೆ! ಗಡಿಬಿಡಿಯಲ್ಲಿ ತಡೆಯಾಜ್ಞೆ ತಂದ ಸದಾನಂದಗೌಡಅವರಿಗೆ ತಮ್ಮ ಸಿಡಿ ಬಿಡುಗಡೆಯ ಕನಸು ಬಿದ್ದಿತ್ತೇ? ತಮ್ಮವರಿಂದಲೇ ಬ್ಲಾಕ್ ಮೇಲ್ ಜನತಾ ಪಾರ್ಟಿ ಎಂದು ಕರೆಸಿಕೊಂಡ ಬಿಜೆಪಿಯಲ್ಲಿ ಬ್ಲಾಕ್ಮೇಲ್ ಭರ್ಜರಿಯಾಗಿ ನಡೆಯುತ್ತಿರುವಂತಿದೆ.
ಕಂಡವರ ಬೆಡ್ ರೂಮಲ್ಲಿ ಕ್ಯಾಮೆರಾ ಇಡುವ ಚಾಳಿ ಹೊಂದಿರುವ ಬಿಜೆಪಿ ಪಕ್ಷದ ನಾಯಕರು ಡಿ.ವಿ ಸದಾನಂದ ಗೌಡರನ್ನು ಬ್ಲಾಕ್ಮೇಲ್ ಮಾಡುತ್ತಿರುವಂತಿದೆ. ಬಿಜೆಪಿಯಲ್ಲಿ ಸ್ವಚ್ಛ ಚಾರಿತ್ರ್ಯ ಹೊಂದಿದವರು ಒಬ್ಬರೂ ಇಲ್ಲ. ಎಂದು ವ್ಯಂಗ್ಯವಾಡಿದೆ.