ನವದೆಹಲಿ, ಮೇ25 (DaijiworldNews/MS): ಕೊಲೆ ಪ್ರಕರಣದಲ್ಲಿ ಸಿಲುಕಿ ಪೊಲೀಸ್ ಕಸ್ಟಡಿಯಲ್ಲಿರುವ ಉತ್ತರ ರೈಲ್ವೇಯ ಉದ್ಯೋಗಿ, ಕುಸ್ತಿಪಟು ಸುಶೀಲ್ ಕುಮಾರ್ ಅವರನ್ನು ಕೆಲಸದಿಂದ ಅಮಾನತುಗೊಳಿಸಲಾಗಿದೆ ಎಂದು ಉತ್ತರ ರೈಲ್ವೇಯ ಸಿಪಿಆರ್ಒ ದೀಪಕ್ ಕುಮಾರ್ ಹೇಳಿದ್ದಾರೆ.
23ರ ಹರೆಯ ಯುವ ಕುಸ್ತಿಪಟು ಸಾಗರ್ ರಾಣಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಶೀಲ್ ಕುಮಾರ್ ಅವರನ್ನು ಬಂಧಿಸಲಾಗಿದೆ. ಕೆಲವು ದಿನಗಳ ಕಾಲ ತಲೆಮರೆಸಿಕೊಂಡಿದ್ದ ಸುಶೀಲ್ ಕುಮಾರ್ ಅವರನ್ನು ದೆಹಲಿ ಪೊಲೀಸರು ಭಾನುವಾರ ಬಂಧಿಸಿದ್ದರು.ಪ್ರಕರಣದ ಬಳಿಕ ಸುಶೀಲ್ ತಲೆ ಮರೆಸಿಕೊಂಡಿದ್ದರಿಂದ ಕಳೆದ ವಾರ ಸುಶೀಲ್ ಸುಳಿವು ನೀಡಿದವರಿಗೆ ದೆಹಲಿ ಪೊಲೀಸರು 1 ಲಕ್ಷ ರೂ. ನಗದು ಪುರಸ್ಕಾರ ಘೋಷಿಸಿದ್ದರು
2008 ಮತ್ತು 2012ರ ಒಲಿಪಿಂಕ್ ನಲ್ಲಿ ಎರಡು ಬಾರಿ ಪದಕ ವಿಜೇತ ಕುಸ್ತಿಪಟುವಾಗಿರುವ ಸುಶೀಲ್ ಕುಮಾರ್ಅವರ ವಿರುದ್ದ ಕ್ರಿಮಿನಲ್ ಅಪರಾಧ ತನಿಖೆ ನಡೆಯುತ್ತಿರುವ ಹಿನ್ನಲೆಯಲ್ಲಿ ಅಮಾನತುಗೊಳಿಸಲಾಗಿದೆ ಎಂದು ಸಿಪಿಆರ್ಒ ದೀಪಕ್ ಕುಮಾರ್ ಹೇಳಿದ್ದಾರೆ.