ಜಮ್ಮು, ಎ.15 (DaijiworldNews/PY): ಗಡಿನಿಯಂತ್ರಣ ರೇಖೆ ದಾಟಿ ಭಾರತದೊಳಕ್ಕೆ ಆಗಮಿಸಿದ್ದ ವ್ಯಕ್ತಿಯನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ಕಳುಹಿಸಿರುವುದಾಗಿ ಎಪ್ರಿಲ್ 15ರ ಗುರುವಾರ ಅಧಿಕಾರಿಗಳು ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
"ಗುಲಾಂ ಖಾದಿರ್ ಎನ್ನುವ ವ್ಯಕ್ತಿಯನ್ನು ಜಮ್ಮು-ಕಾಶ್ಮೀರದ ಪೂಂಚ್ ಜಿಲ್ಲೆಯ ರಾವಲ್ ಕೋಟ್ ಹಾಗೂ ಪೂಂಚ್ ಗಡಿಭಾಗದಲ್ಲಿ ಪಿಒಕೆ ಅಧಿಕಾರಿಗಳಿಗೆ ಭಾರತೀಯ ಹಸ್ತಾಂತರಿಸಿದೆ" ಎಂದು ವರದಿ ಹೇಳಿದೆ.
"ಆಕಸ್ಮಿಕವಾಗಿ ಗಡಿನಿಯಂತ್ರಣ ರೇಖೆ ದಾಟಿ ಭಾರತದೊಳಕ್ಕೆ ನುಗ್ಗಿದ ಗಿಮ್ ಗ್ರಾಮದ ನಿವಾಸಿ ಗುಲಾಂ ಎಂಬವರನ್ನು ಪಿಒಕೆ ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು" ಎಂದು ಹೇಳಿದ್ದಾರೆ.
"ಎಪ್ರಿಲ್ 11ರಂದು ಗುಲಾಂ ಖಾದಿರ್ ಭಾರತದ ಗಡಿಯೊಳಕ್ಕೆ ಪ್ರವೇಶಿಸಿದ್ದರು. ಸೂಕ್ತ ತನಿಖೆಯ ಬಳಿಕ ಮಾನವೀಯತೆಯ ಆಧಾರದ ಮೇಲೆ ವಾಪಾಸ್ ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ಕಳುಹಿಸಿಕೊಡಲಾಗಿದೆ" ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.