ಬೆಂಗಳೂರು, ಮಾ 26 (DaijiworldNews/MS): ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿ.ಡಿ ಪ್ರಕರಣದ ಸಂತ್ರಸ್ತೆಎನ್ನಲಾದ ಯುವತಿ ಅಜ್ಞಾತ ಸ್ಥಳದಿಂದ ಮೂರನೇ ವಿಡಿಯೋವನ್ನು ಹರಿಯಬಿಟ್ಟಿದ್ದಾರೆ. ಶಾಸಕ ರಮೇಶ್ ಜಾರಕಿಹೊಳಿ ವಿರುದ್ದ ಕಾನೂನು ಹೋರಾಟಕ್ಕೆ ಸಿದ್ದ ಎಂದು ಹೇಳಿದ್ದಾರೆ.
" 24 ನೇ ದಿನದಿಂದ ಜೀವಭಯ ಜೀವ ಬೆದರಿಕೆಯನ್ನು ನಾನು ಎದುರಿಸುತ್ತಿದ್ದು, ಈಗ ನನಗೆ ಧೈರ್ಯ ಬಂದಿದೆ ಎಂದು ಹೇಳಿದ್ದಾರೆ. ರಾಜ್ಯದ ಜನರು ನನಗೆ ಬೆಂಬಲ ನೀಡಿದ್ದಾರೆ. ಎಲ್ಲಾ ಪಕ್ಷದ ನಾಯಕರು, ಎಲ್ಲಾ ಸಂಘಟನೆಯಿಂದ ಹಾಗೂ ರಾಜ್ಯದ ಎಲ್ಲಾ ತಂದೆ ತಾಯಿಗಳು ನನಗೆ ಆಶೀರ್ವಾದ ಮಾಡಿದ್ದಾರೆ. ನಾನು ಇಲ್ಲಿವರೆಗೆ ಭಯದಿಂದಲೇ ಇದ್ದು ಇದೀಗ ಶಾಸಕ ರಮೇಶ್ ಜಾರಕಿಹೊಳಿ ವಿರುದ್ದ ಮಧ್ಯಾಹ್ನ 2 ಗಂಟೆಗೆ ವಕೀಲ ಜಗದೀಶ್ ಎಂಬವರ ಮೂಲಕ ಪೊಲೀಸ್ ಆಯುಕ್ತರಿಗೆ ನಾನು ದೂರು ದಾಖಲಿಸುತ್ತೇನೆ" ಎಂದು ಹೇಳಿದ್ದಾರೆ.