ಕಲಬುರಗಿ, ಮಾ.20 (DaijiworldNews/PY): ಮಗನೋರ್ವ ತನ್ನ ತಾಯಿಯ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆಗೈದ ಘಟನೆ ಕಲಬುರಗಿ ಜಿಲ್ಲೆಯ ಜೀವರ್ಗಿ ತಾಲೂಕಿನ ಕಲ್ಲೂರು ಗ್ರಾಮದಲ್ಲಿ ಶನಿವಾರ ನಡೆದಿದೆ.
ಭೀಮಬಾಯಿ ಪೂಜಾರಿ(75) ಹತ್ಯೆಯಾದ ದುರ್ದೈವಿ. ಆಕೆಯನ್ನು ಕಿರಿಯ ಪುತ್ರ ಯಲ್ಲಪ್ಪ ಪೂಜಾರಿ ಹತ್ಯೆ ಮಾಡಿದ್ದಾನೆ.
ಮದ್ಯ ಕುಡಿಯಲು ಹಣ ನೀಡದ ಕಾರಣ ಯಲ್ಲಪ್ಪ ಹೆತ್ತ ತಾಯಿಯನ್ನೇ ಹತ್ಯೆಗೈದಿದ್ದಾನೆ. ನೆಲೋಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.