ಮಂಗಳೂರು/ಉಡುಪಿ, ಡಿ.24 (DaijiworldNews/MB) : ಡಿಸೆಂಬರ್ 24, ಗುರುವಾರ ನಗರದ ಮತ್ತು ಸುತ್ತಮುತ್ತಲಿನ ಚರ್ಚುಗಳಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರು ಕ್ರಿಸ್ಮಸ್ ಹಬ್ಬದ ಮುಂಚಿನ ದಿನದ ಸಾಮೂಹಿಕ ಪ್ರಾರ್ಥನಾ ಕಾರ್ಯಕ್ರಮದಲ್ಲಿ ಭಾಗಿಯಾದರು.
ನಾಳೆ ಕ್ರಿಸ್ಮಸ್ ಆಗಿದ್ದು ಇಂದು ನಗರದೆಲ್ಲೆಡೆ ಚರ್ಚುಗಳು ನಕ್ಷತ್ರಗಳು, ದೀಪಗಳು ಹಾಗೂ ಅಲಂಕಾರಗಳಿಂದ ಕಂಗೊಳಿಸುತ್ತಿದೆ.
ಮಂಗಳೂರು ಪ್ರಾಂತ್ಯದ ಬಿಷಪ್ ಡಾ| ಪೀಟರ್ ಪಾವ್ಲ್ ಸಲ್ಡಾನ್ಹ ರೊಸಾರಿಯೋ ಕ್ಯಾಥೆಡ್ರೆಲ್ನಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸಿದರು.
ಕರೋಲ್ ಗಾಯನ, ರೋಮಾಂಚಕ ಕ್ರಿಬ್ಗಳು ಮತ್ತು ಆಕರ್ಷಕ ಕ್ರಿಸ್ಮಸ್ ಟ್ರೀಗಳು ಹಬ್ಬದ ವಾತಾವಾರಣಕ್ಕೆ ಸಾಕ್ಷಿಯಾದವು.
ಉಡುಪಿ
ಸಾಂಕ್ರಾಮಿಕದ ಮಧ್ಯೆ ಈ ವರ್ಷ ಕ್ರಿಸ್ಮಸ್ ಈವ್ ಅನ್ನು ಸರಳವಾದ ಆಚರಿಸಲಾಯಿತು.
ಉಡುಪಿ ಪ್ರಾಂತ್ಯದ ಬಿಷಪ್ ಡಾ. ಜೆರಾಲ್ಡ್ ಐಸಾಕ್ ಲೋಬೊ ಕಲ್ಯಾಣಪುರದ ಮಿಲಾಗ್ರೆಸ್ ಕ್ಯಾಥೆಡ್ರೆಲ್ನಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಚರ್ಚ್ನಲ್ಲಿ ಕೊರೊನಾ ನಿಯಮಗಳಿಗೆ ಅನುಸಾರವಾಗಿ ಆಚರಣೆಗಳನ್ನು ನಡೆಸಲಾಯಿತು.
ಕಲ್ಯಾಣಪುರ ಮಿಲಾಗ್ರೀಸ್ ಚರ್ಚ್ನ ಧರ್ಮಗುರು ಫಾ. ವಲೇರಿಯನ್ ಮೆಂಡೊನ್ಸಾ, ಸಹಾಯಕ ಪಾದ್ರಿ ಫಾ. ಕ್ಯಾನ್ಯೂಟ್ ನೊರೊನ್ಹಾ ಹಾಗೂಇತರ ಪಾದ್ರಿಗಳು ಉಪಸ್ಥಿತರಿದ್ದರು.