ಉಡುಪಿ, ಜು.03(DaijiworldNews/AK): ಕರಾವಳಿ ಕರ್ನಾಟಕದ ಪ್ರತಿಭಾನ್ವಿತ ವಿದ್ಯಾರ್ಥಿ ಪ್ರತಿಭೆಗಳಿಗೆ ಸದಾ ಪ್ರೋತ್ಸಾಹಿಸುತ್ತಾ ಬಂದಿರುವ ದಾಯ್ಜಿವರ್ಲ್ಡ್ ಉಡುಪಿ ಸ್ಟುಡಿಯೋ ಇದೀಗ ಮತ್ತೊಮ್ಮೆ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ "ಚಾಣಾಕ್ಷ ಚಾಲೆಂಜ್" ರಸಪ್ರಶ್ನೆ ಸ್ಪರ್ಧೆಯ ಮೂರನೇ ಆವೃತ್ತಿಯನ್ನು ಪ್ರಸ್ತುತಪಡಿಸುತ್ತಿದೆ.
ಜನಪ್ರಿಯ ರಸಪ್ರಶ್ನೆಯ ಸ್ಪರ್ಧೆಯ ಮೊದಲ ಎರಡು ಸೀಸನ್ಗಳ ಯಶಸ್ವಿಯಾಗಿ ಮುಗಿಸಿದ ಬೆನ್ನಲ್ಲೇ ಇದೀಗ ಮೂರನೇಯ ಸೀಸನ್ ಕಡೆಗೆ ದಾಪುಗಾಲು ಹಾಕುತ್ತಾ, ಸ್ಪರ್ಧೆಗೆ ಈಗಾಗಲೇ ನೋಂದಣಿ ಪ್ರಾರಂಭವಾಗಿದ್ದು, ಇನ್ನು ಕೇವಲ ಮೂರು ದಿನ ಬಾಕಿ ಇದೆ.
ಚಾಣಾಕ್ಷ ಚಾಲೆಂಜ್ ರಸಪ್ರಶ್ನೆ ಸ್ಪರ್ಧೆಯ ಮೊದಲ ಎರಡು ಆವೃತ್ತಿಗಳಲ್ಲಿ ವಿವಿಧ ಶಾಲೆಯ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದ್ದರು. ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಭಾಗಗಳಿಂದ ನೂರಾರು ವಿದ್ಯಾರ್ಥಿಗಳು ಈ ಸ್ಪರ್ಧೆಯ ಭಾಗವಾಗಿದ್ದರು. ಈ ಬಾರಿ ಮೂರನೇ ಆವೃತ್ತಿಯ "ಚಾಣಾಕ್ಷ ಚಾಲೆಂಜ್" ರಸಪ್ರಶ್ನೆ ಸ್ಪರ್ಧೆಯು ಸಂಪೂರ್ಣ ಹೊಸತದೊಂದಿಗೆ ನಡೆಸಲ್ಪಟ್ಟು, ವಿದ್ಯಾರ್ಥಿಗಳಿಗೆ ತಮ್ಮ ಬುದ್ದಿಶಕ್ತಿಯನ್ನು ಪ್ರದರ್ಶಿಸಲು ಹೊಚ್ಚ ಹೊಸ ವೇದಿಕೆಯನ್ನು ಒದಗಿಸಿಕೊಡಲಿದೆ.
ಇಡೀ ಸರಣಿಯನ್ನು ದಾಯ್ಜಿವರ್ಲ್ಡ್ ಉಡುಪಿ ಸ್ಟುಡಿಯೋದಲ್ಲಿ ರೆಕಾರ್ಡ್ ಮಾಡಲಾಗುತ್ತದೆ ಮತ್ತು ದಾಯ್ಜಿವರ್ಲ್ಡ್ 24x7 ಚಾನೆಲ್ನಲ್ಲಿ ಸಂಚಿಕೆ ಮಾದರಿಯಲ್ಲಿ ಪ್ರಸಾರ ಮಾಡಲಾಗುತ್ತದೆ.
ಸ್ಪರ್ಧೆಯು ಎಲ್ಲಾ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಮುಕ್ತವಾಗಿದೆ. ಪ್ರತಿಯೊಂದು ಸಂಚಿಕೆಯು ವಿವಿಧ ಹಂತಗಳನ್ನು ಒಳಗೊಂಡಿರುತ್ತದೆ. ಸಾಮಾನ್ಯ ಜ್ಞಾನ, ರಾಜಕೀಯ, ಇತಿಹಾಸ, ಪ್ರಸ್ತುತ ವ್ಯವಹಾರಗಳು, ಕ್ರೀಡೆಗಳು ಮತ್ತು ಇನ್ನಿತರ ವಿಷಯಗಳ ವ್ಯಾಪ್ತಿಯನ್ನು ಒಳಗೊಂಡಿರುತ್ತದೆ.
ಕರಾವಳಿ ಕರ್ನಾಟಕದ ಹೆಸರಾಂತ ನಿರೂಪಕ ಅಲ್ವಿನ್ ದಾಂತಿ ಸೀಸನ್ 3 ರ ಕ್ವಿಜ್ ಮಾಸ್ಟರ್ ಆಗಿರುತ್ತಾರೆ.ನೋಂದಣಿಗೆ ಕೊನೆಯ ದಿನಾಂಕ ಜುಲೈ 6.
ಸ್ಪರ್ಧೆಯ ನಿಯಮಗಳು ಮತ್ತು ನಿಬಂಧನೆಗಳು/ ಪ್ರಸಾರದ ಮಾಹಿತಿ:
1. ಒಂದು ತಂಡದಲ್ಲಿ ಕೇವಲ ಇಬ್ಬರಿಗೆ ಮಾತ್ರ ಅವಕಾಶ.
2. ಪ್ರೌಢಶಾಲಾ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ.
3. ಭಾಗವಹಿಸುವವರು ತಮ್ಮ ಶಾಲಾ ಮುಖ್ಯಸ್ಥರ ಸಹಿ ಮತ್ತು ಮೊಹರು ಮಾಡಿದ ಪತ್ರವನ್ನು ಸಲ್ಲಿಸುವ ಮೂಲಕ ತಮ್ಮ ಭಾಗವಹಿಸುವಿಕೆಯನ್ನು ದೃಢೀಕರಿಸಬೇಕು. ನೋಂದಣಿ ಗಡುವಿನ ಮೊದಲು ಇಮೇಲ್ ಅಥವಾ ಪೋಸ್ಟ್ ಮೂಲಕ ಕಳುಹಿಸಬೇಕಾದ ಈ ಪತ್ರವು ಭಾಗವಹಿಸುವವರ ಹೆಸರು, ತರಗತಿ ಮತ್ತು ಅವರ ಶಿಕ್ಷಕರು ಮತ್ತು ಪೋಷಕರ ಮೊಬೈಲ್ ಸಂಖ್ಯೆಗಳನ್ನು ಒಳಗೊಂಡಿರಬೇಕು.
4. ಸ್ಪರ್ಧಾರ್ಥಿಗಳೊಂದಿಗೆ ಒಬ್ಬರು ಶಿಕ್ಷಕರು ಇರತಕ್ಕದ್ದು. ಮುಂದಿನ ಸಂವಹನವನ್ನು ಅವರ ಮೂಖಾಂತರ ನಡೆಸಲಾಗುವುದು.
5. ಸ್ಪರ್ಧೆಯಲ್ಲಿ ವಿವಿಧ ವಿಷಯಗಳಿಗೆ ಸಂಭಂದಪಟ್ಟ ಪ್ರಶ್ನೆಗಳನ್ನು ಕೇಳಲಾಗುತ್ತದೆ.
6. ಕಾರ್ಯಕ್ರಮವನ್ನು ಕನ್ನಡ ಭಾಷೆಯಲ್ಲಿ ನಡೆಸಲಾಗುವುದು. ಕನ್ನಡ ಮತ್ತು ಇಂಗ್ಲಿಷ್ ಎರಡರಲ್ಲೂ ಪ್ರಶ್ನೆಗಳನ್ನು ಕೇಳಲಾಗುತ್ತದೆ.
7. ಪ್ರತಿ ತಂಡಕ್ಕೂ ಆಯಾ ಶಾಲೆಯ ಹೆಸರಿಡಲಾಗುವುದು.
8. ಕಾರ್ಯಕ್ರಮದಲ್ಲಿ ಬದಲಾವಣೆಗಳು, ದಿನಾಂಕ ಮುಂದೂಡಿಕೆ, ಸಮಯ ನಿಗಧಿ ಅಥವಾ ರದ್ದತಿ ಸೇರಿದಂತೆ ಕಾರ್ಯಕ್ರಮದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡುವ ಹಕ್ಕನ್ನು ಸಂಘಟಕರು ಕಾಯ್ದಿರಿಸಿದ್ದಾರೆ.
9. ಸ್ಪರ್ಧೆಯ ಬಗ್ಗೆ ಎಲ್ಲಾ ಮಾಹಿತಿಯನ್ನು ರೆಕಾರ್ಡಿಂಗ್ಗಳ ಮೊದಲು ತಿಳಿಸಲಾಗುವುದು.
10. ಕ್ವಿಜ್ ಮಾಸ್ಟರ್ನ ನಿರ್ಧಾರವೇ ಅಂತಿಮವಾಗಿರುತ್ತದೆ.
11. ಸ್ಪರ್ಧೆಯು ವಿವಿಧ ಸುತ್ತುಗಳಲ್ಲಿ ನಡೆಯುತ್ತದೆ ಮತ್ತು ದಾಯ್ಜಿವರ್ಲ್ಡ್ 24x7 ವಾಹಿನಿಯಲ್ಲಿ ಸಂಚಿಕೆ ರೂಪದಲ್ಲಿ ಪ್ರಸಾರವಾಗುತ್ತದೆ.
12. ದಾಯ್ಜಿವರ್ಲ್ಡ್ ಉಡುಪಿ ಸ್ಟುಡಿಯೋದಲ್ಲಿ ಸಂಚಿಕೆಯ ರೆಕಾರ್ಡಿಂಗ್ ನಡೆಯಲಿದೆ.
ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನಗಳ ವಿಜೇತರಿಗೆ ಅತ್ಯಾಕರ್ಷಕ ನಗದು ಬಹುಮಾನ, ಟ್ರೋಫಿಗಳು ಮತ್ತು ಪ್ರಮಾಣಪತ್ರಗಳನ್ನು ನೀಡಲಾಗುವುದು. ಎಲ್ಲಾ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರಗಳನ್ನು ನೀಡಲಾಗುವುದು.
ನೋಂದಾವಣೆ ಮತ್ತು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ದಾಯ್ಜಿವಲ್ಡ್ ಉಡುಪಿ
ಮೂರನೇ ಮಹಡಿ. ಮಾಂಡವಿ ಟ್ರೇಡ್ ಸೆಂಟರ್
ಕಡಿಯಾಳಿ, ಉಡುಪಿ – 576102
ಮೊಬೈಲ್ ಸಂಖ್ಯೆ: +91 73386 37683 / +91 99001 61556