ಮುಲ್ಕಿ, ಜು 17 (DaijiworldNews/SM): ಕೈಗಾರಿಕೆಗಳಿಗೆ ಮುಲ್ಕಿ ಸಮೀಪದ ಬಳ್ಳುಂಜೆ, ಉಳಿಪಾಡಿ, ಕೊಲ್ಲೂರು ಗ್ರಾಮಗಳಲ್ಲಿ ಹಲವಾರು ಎಕರೆ ಭೂಸ್ವಾಧೀನ ಮಾಡಲು ನಿರ್ಧಾರ ಮಾಡಲಾಗಿತ್ತು. ಇದಕ್ಕೆ ಗ್ರಾಮಸ್ಥರು ತೀವ್ರ ವಿರೋಧವನ್ನು ವ್ಯಕ್ತಪಡಿಸಿದ್ದರು.
ಈ ವಿಷಯದ ಗಂಭೀರತೆ ಅರಿತು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ ರವರ ನೇತೃತ್ವದಲ್ಲಿ ರಾಜ್ಯದ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿರವರ ಬಳಿ ಚರ್ಚೆ ಮಾಡಿ ಕೃಷಿ ಭೂಮಿ ಉಳಿಸಿಕೊಡುವಂತೆ ಮನವಿ ಮಾಡಲಾಗಿದೆ ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದ್ದಾರೆ.
ಈ ಬಗ್ಗೆ ಸ್ಪಂದಿಸಿದ ಸಚಿವರು ಅಧಿಕಾರಿಗಳಿಗೆ ನಿರ್ದೇಶನ ನೀಡಿ ಯಾವುದೇ ರೀತಿಯ ಸರ್ವೇ ಇನ್ನಿತರ ಕೆಲಸಗಳನ್ನು ಮಾಡಬಾರದು ಎಂದು ಆದೇಶ ನೀಡಿದ್ದಾರೆ ಹಾಗೂ ಬಳ್ಕುಂಜೆ ಭಾಗದ ಗ್ರಾಮಸ್ಥರಲ್ಲಿ ಕೈಗಾರಿಕೆಗಳಿಗೆ ಬಲವಂತದ ಭೂ ಸ್ವಾಧೀನದ ಬಗ್ಗೆ ಯಾವುದೇ ಆತಂಕ ಬೇಡ ಎಂದು ಸ್ಪಷ್ಟನೆ ಸಿಕ್ಕಿದೆ.