ವಿಟ್ಲ, ಜು 17 (DaijiworldNews/HR): ಬೋಳಂತೂರು ಗ್ರಾಮದ ತುಳಸೀವನ ಎಂಬಲ್ಲಿ ರಸ್ತೆ ಬದಿ ದ್ವಿಚಕ್ರ ವಾಹನ ನಿಲ್ಲಿಸಿ ಮನೆಗೆ ಹೋಗಲು ಯುವತಿ ಹೊರಡುತ್ತಿದ್ದಂತೆ ಇನ್ನೋವಾ ಕಾರು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಬಳಿಕ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಗಳಿಗೆ ಡಿಕ್ಕಿಹೊಡೆದು ಚರಂಡಿಯಲ್ಲಿ ಇಳಿದಿರುವ ಘಟನೆ ನಡೆದಿದೆ.
ಕಲ್ಲಡ್ಕ ಕಡೆಯಿಂದ ಎನ್.ಸಿ.ರೋಡ್ ಕಡೆಗೆ ಮಿತಿಮೀರಿದ ವೇಗದಲ್ಲಿ ಬಂದ ಇನ್ನೋವಾ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಬಳಿಕ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಗಳಿಗೆ ಡಿಕ್ಕಿಹೊಡೆದು ಚರಂಡಿಯಲ್ಲಿ ಇಳಿದಿದೆ.
ಇನ್ನು ಇನ್ನೋವಾದಲ್ಲಿದ್ದ ಇಬ್ಬರು ಯುವಕರ ಪೈಕಿ ಒಬ್ಬ ಗಾಯಗೊಂಡಿದ್ದು, ಯುವತಿ ಕೂಡ ಅದೃಷ್ಟವಶಾತ್ ಪಾರಾಗಿದ್ದಾರೆ.