ಕಾಸರಗೋಡು, ಜು 16 (DaijiworldNews/HR): ಗಾಳಿಗೆ ತೆಂಗಿನ ಮರ ಮುರಿದು ಬಿದ್ದು ಕಾಸರಗೋಡು ಕನ್ನಡ ಪತ್ರಕರ್ತರ ಸಂಘದ ಕಾರ್ಯದರ್ಶಿ, ದೈಜಿವರ್ಲ್ಡ್ ವರದಿಗಾರ ಸ್ಟೀಫನ್ ಕ್ರಾಸ್ತಾರ ಪುತ್ರ ನಿಧನರಾಗಿದ್ದಾರೆ.
ಎಳನೇ ತರಗತಿ ವಿದ್ಯಾರ್ಥಿಸೋನು ಕ್ರಾಸ್ತಾ (13) ಮೃತ ಬಾಲಕ.
ಮನೆ ಬಳಿಯ ತೋಟದಲ್ಲಿ ಇಂದು ಮಧ್ಯಾಹ್ನ ಉಂಟಾದ ಭಾರೀ ಸುಂಟರ ಗಾಳಿಗೆ ತೆಂಗಿನ ಮರ ಮುರಿದು ಬಿದ್ದು ಮೃತಪಟ್ಟಿದ್ದಾರೆ.
ಮೃತರು ತಂದೆ, ತಾಯಿ, ತಂಗಿ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.
ಅಂತ್ಯಕ್ರಿಯೆಯು ಜುಲೈ 17 ರ ಭಾನುವಾರದಂದು ಮಧ್ಯಾಹ್ನ 3.30 ಕ್ಕೆ ನಿವಾಸವಾದ ಕೊಂಡಲಕಾಡ್ ಕಯ್ಯಾರ್ನಿಂದ ಕಯ್ಯರ್ನ ಕ್ರೈಸ್ಟ್ ದಿ ಕಿಂಗ್ ಚರ್ಚ್ಗೆ ಹೊರಟು ಸಂಜೆ 4 ಗಂಟೆಗೆ ಸಾಮೂಹಿಕ ಪ್ರಾರ್ಥನೆ ನಡೆಯಲಿದೆ.