ಉಡುಪಿ, ಜು 16 (DaijiworldNews/HR): ಸುಮಾರು ವರ್ಷಗಳಿಂದ ಸಮಾಜ ಮಂದಿರ ಅಜೀರ್ಣಾವಸ್ಥೆಯಲ್ಲಿದ್ದು ಅದನ್ನು ಕೆಡವಿ ಪ್ರಸ್ತುತ ನೂತನ ಸಮುದಾಯ ಭವನವನ್ನು ನಿರ್ಮಿಸುವರೇ ನೀಲ ನಕಾಶೆಯನ್ನು ತಯಾರಿಸಿ ಅಂದಾಜು 86 ಲಕ್ಷ ರೂಪಾಯಿಗಳು ತಗಲುವುದೆಂದು ಕಾಮಗಾರಿಯನ್ನು ಪ್ರಾರಂಭಿಸಲಾಗಿದೆ. ಸಮಾಜದ ಸದಸ್ಯರಿಂದ ರೂ. 13 ಲಕ್ಷ ರೂಪಾಯಿಗಳು ಹಾಗೂ ಸರಕಾರದಿಂದ 15 ಲಕ್ಷ ಒಟ್ಟು 28 ಲಕ್ಷ ರೂಪಾಯಿಗಳು ಕಾಮಗಾರಿ ಆಗಿರುತ್ತದೆ. ಕಾಮಗಾರಿ ಪೂರ್ಣವಾಗಲು ಇನ್ನು 25 ಲಕ್ಷದ ಅವಶ್ಯಕತೆ ಇದ್ದು, ಮುಖ್ಯಮಂತ್ರಿಗಳು, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಮಾಜ ಕಲ್ಯಾಣ ಸಚಿವರು ಪರಿಯಾಳ ಸಮಾಜದ ಸಮುದಾಯ ಭವನವನ್ನು ಪೂರ್ಣಗೊಳಿಸುವಂತೆ ಜಿಲ್ಲಾ ಪರಿಯಾಳ ಸಂಘದ ಅಧ್ಯಕ್ಷರಾದ ಶಂಕರ್ ಸಾಲಿಯಾನ್ ಕಟಪಾಡಿ ಆಗ್ರಹಿಸಿದರು.
ಇಂದು ಉಡುಪಿ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, 55 ವರ್ಷಗಳ ಹಿಂದೆ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಉಚ್ಚಿಲದಲ್ಲಿ 25 ಸೆಂಟ್ಸ್ ಜಾಗವನ್ನು ನಮ್ಮ ಸಮಾಜದ ಹಿರಿಯರು ಖರೀದಿ ಮಾಡಿ ಅಲ್ಲಿ ಸಮಾಜ ಮಂದಿರವನ್ನು ನಿರ್ಮಾಣ ಮಾಡಿದ್ದರು. ಪರಿಯಾಳ ಸವಿತಾ ಸಮಾಜದ 27 ವರ್ಗಗಳಲ್ಲಿ 1 ವರ್ಗವಾಗಿದ್ದು ಅವಿಭಜಿತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಈ ಸಮುದಾಯದವರು ವಾಸವಾಗಿದ್ದಾರೆ. ಕ್ಷೌರಿಕ ವೃತ್ತಿಯನ್ನು ಮಾಡುತ್ತಿದ್ದು ಸುಮಾರು 80 ವರ್ಷಗಳ ಹಿಂದೆ ಸಮಾಜದ ಹಿರಿಯರು ಜಿಲ್ಲಾ ಪರಿಯಾಳ ಸಮಾಜ ಸುಧಾರಕ ಸಂಘ ಎಂದು ಜಿಲ್ಲೆಯಾದ್ಯಂತ ಸಂಘಟನೆಯನ್ನು ಬಲಪಡಿಸುತ್ತಿದ್ದೇವೆ ಹಾಗೂ ಉಡುಪಿ, ಕುಂದಾಪುರ, ಕಾರ್ಕಳ ತಾಲೂಕುಗಳಲ್ಲಿ ಸಂಘಟನೆಯು ಪಬುದ್ಧವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.
ಇನ್ನು ಹಲವಾರು ವರ್ಷಗಳಿಂದ ಸಮಾಜದ ಬಡ ವಿದ್ಯಾರ್ಥಿಗಳಿಗೆ ಯಾಕೆ ವಿತರಣೆ ಮತ್ತು ಸಲಕರಣೆ ಹಾಗೂ ವಿದ್ಯಾರ್ಥಿವೇತನವನ್ನೂ, ಅನಾರೋಗ್ಯ ಪೀಡಿತ ಬಡವರಿಗೆ ಆರ್ಥಿಕ ಸಹಾಯ ಹಸ್ತವನ್ನು ಚಾಚಿದೆ ಎಂದು ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ಸುಧಾಕರ ಸಾಲ್ಯಾನ್ ಕಟಪಾಡಿ, ಪ್ರವೀಣ್ ಕುಮಾರ್, ಸಾಲ್ಯಾನ್ ಬಿಜೈ, ಮಂಜುನಾಥ ಸಾಲ್ಯಾನ್ ತ್ರಾಸಿ, ಮಹೇಶ್ ಸುವರ್ಣ ಅರಾಟೆ, ಮನೋಜ್ ಸಾಲ್ಯಾನ್ ಬೆಳಣ್, ಸುಜಯ್ ಸುವರ್ಣ ವಕ್ವಾಡಿ, ಶೇಖರ್ ಸಾಲ್ಯಾನ್ ಆದಿ ಉಡುಪಿ ಉಪಸ್ಥಿತರಿದ್ದರು.