ಮಂಗಳೂರು, ಜು 16 (DaijiworldNews/HR): ಸಿಎಫ್ಐ ಗರ್ಲ್ಸ್ ಕಾನ್ಫರೆನ್ಸ್ ಗೆ ಅನುಮತಿ ನಿರಾಕರಿಸಿದ್ದಕ್ಕೆ ಮುಸ್ಲಿಂ ವಿದ್ಯಾರ್ಥಿನಿಯರು ಧರಣೆ ನಡೆಸಿದ್ದು, ಈ ವೇಳೆ ವಿದ್ಯಾರ್ಥಿನಿಗಳನ್ನು ಖಾಕಿ ಪಡೆ ತರಾಟೆ ತೆಗೆದುಕೊಂಡಿರುವ ಘಟನೆ ನಡೆದಿದೆ.
ಮಂಗಳೂರಿನ ಜ್ಯೋತಿ ಸರ್ಕಲ್ ನಿಂದ ಮೆರವಣಿಗೆ ನಡೆಸಲು ಸಿಎಫ್ ಐ ನಿರ್ಧರಿಸಿದ್ದು, ಆದರೆ ಜ್ಯೋತಿ ಸರ್ಕಲ್ ಬಳಿ ಅನುಮತಿ ನೀಡದ ಹಿನ್ನೆಲೆ ಮಿಲಾಗ್ರಿಸ್ ಬಳಿ ಕಾರ್ಯಕರ್ತರು ಸೇರಿ ಪತಿಭಟನೆ ನಡೆಸಲು ಅನುಮತಿ ನೀಡಿ ಎಂದು ಪೊಲೀಸರ ಜೊತೆ ಕಾರ್ಯಕರ್ತರು ವಾಗ್ವಾದ ನಡೆಸಿದ್ದಾರೆ.
ಪ್ರತಿಭಟನೆ ವಿರುದ್ಧ ಕಮಿಷನರ್ ವಾರ್ನ್ ಮಾಡಿದ್ದರೂ ಬಳಿಕ ಮಿಲಾಗ್ರಿಸ್ ಬಳಿ ಪೊಲೀಸ್ ಕಮಿಷನರ್ ಮತ್ತು ಸಿಎಫೈಐ ಮುಖಂಡರು ವಾಗ್ವಾದ ನಡೆಸಿದ್ದು, ಬಳಿಕ ಪೊಲೀಸರ ಎಚ್ಚರಿಕೆ ನೀಡಿದ ಬೆನ್ನಲ್ಲೇ ಬಸ್ಸ್ ಹತ್ತಿದ ವಿದ್ಯಾರ್ಥಿನಿಯರು ಪುರಭವನದತ್ತ ತೆರಳಿದ್ದಾರೆ.
ಇನ್ನು ಕರಾವಳಿಯಲ್ಲಿ ಹಿಜಾಬ್ ವಿವಾದ ಎಬ್ಬಿಸಿದ ಉಡುಪಿ ಕಾಲೇಜಿನ ಆರು ವಿದ್ಯಾರ್ಥಿನಿಯರು ಗರ್ಲ್ಸ್ ಕಾನ್ಫರೆನ್ಸ್ ಗೆ ಅತಿಥಿಗಳಗಿದ್ದರು ಎಂದು ತಿಳಿದು ಬಂದಿದೆ.