ಮಂಗಳೂರು, ಜು 16 (DaijiworldNews/MS): ಕೋವಿಡ್-19 ಸೋಂಕಿನಿಂದ ಇಬ್ಬರೂ ಪೋಷಕರನ್ನು ಕಳೆದುಕೊಂಡು ಕುಟುಂಬದ ಇತರೆ ಸದಸ್ಯರ ಆರೈಕೆಯಲ್ಲಿರುವ 11 ಮಕ್ಕಳನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಗುರುತಿಸಿದೆ.
ಆ ಪೈಕಿ ಸುಳ್ಯದ ಒಬ್ಬ ಬಾಲಕನಿಗೆ ಡಿಪ್ಲೋಮ ಶಿಕ್ಷಣಕ್ಕೆ ಸುಳ್ಯದ ನೆಹರು ಮೆಮೋರಿಯಲ್ ಕಾಲೇಜು ಹಾಗೂ ಉಪ್ಪಿನಂಗಡಿಯ ಬಾಲಕಿಗೆ ಉನ್ನತ ವ್ಯಾಸಂಗಕ್ಕಾಗಿ ದೇರಳಕಟ್ಟೆಯ ನಿಟ್ಟೆ ಇನ್ಸಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸ್ ನಲ್ಲಿ ಜಿಲ್ಲಾಧಿಕಾರಿಗಳ ಕೋರಿಕೆ ಮೇರೆಗೆ ಸಂಬಂಧಿಸಿದ ಸಂಸ್ಥೆಯವರು ವಿದ್ಯಾಭ್ಯಾಸಕ್ಕೆ ಉಚಿತವಾಗಿ ನೆರವು ನೀಡಿರುವುದರ ಜೊತೆಗೆ ಉಚಿತ ವಸತಿ ವ್ಯವಸ್ಥೆಯನ್ನು ಒದಗಿಸಿಕೊಟ್ಟಿದ್ದಾರೆ.
ಈ ಸಮಾಜಮುಖಿ ಕಾರ್ಯವನ್ನು ಜಿಲ್ಲಾಡಳಿತ ಶ್ಲಾಘಿಸಿದೆ. ಸುಳ್ಯದ ನೆಹರು ಮೆಮೋರಿಯಲ್ ಕಾಲೇಜಿನ ಅಧ್ಯಕ್ಷ ಡಾ. ಕೆ.ವಿ. ಚಿದಾನಂದ ಹಾಗೂ ದೇರಳಕಟ್ಟೆಯ ನಿಟ್ಟೆ ಇನ್ಸಿಟ್ಯೂಟ್ ಆಫ್ ನಸಿರ್ಂಗ್ ಸೈನ್ಸ್ನ ವ್ಯವಸ್ಥಾಪಕ ನಿರ್ದೇಶಕ ವಿಶಾಲ್ ಹೆಗ್ಡೆ ಅವರಿಗೆ ಅಭಿನಂದನೆ ಸಲ್ಲಿಸಿದೆ.