ಬಂಟ್ವಾಳ, ಜು 15 (DaijiworldNews/SM) ಶುಕ್ರವಾರ ಮಧ್ಯಾಹ್ನ ವೇಳೆ ಸುರಿದ ಬಾರಿ ಗಾಳಿ ಮಳೆಗೆ ಬೃಹತ್ ಗಾತ್ರದ ಮೇಪ್ಲವರ್ ಮರವೊಂದು ಬಿದ್ದ ಪರಿಣಾಮವಾಗಿ ರಸ್ತೆ ಪಕ್ಕದಲ್ಲಿ ನಿಲ್ಲಿಸಲಾಗಿದ್ದ ಕಾರು ಹಾಗೂ ರಿಕ್ಷಾವೊಂದು ಜಖಂಗೊಂಡ ಘಟನೆ ಬಿ.ಸಿರೋಡಿನಲ್ಲಿ ನಡದಿದೆ.
ಬಂಟ್ವಾಳ ಹೃದಯಭಾಗದಲ್ಲಿರುವ ಶ್ರೀ ಅನ್ನಪೂರ್ಣೇಶ್ವರಿ ದೇವಾಲಯದ ಸಮೀಪದಲ್ಲಿರುವ ತೋಟಗಾರಿಕಾ ಇಲಾಖೆಯ ಆವರಣದಲ್ಲಿದ್ದ ಮೇ ಪ್ಲವರ್ ಮರವೊಂದು ಗಾಳಿಗೆ ಬುಡಸಮೇತ ಉರುಳಿ ಬಿದ್ದಿದೆ.
ಈ ಸಂದರ್ಭದಲ್ಲಿ ರಸ್ತೆ ಪಕ್ಕದಲ್ಲಿ ನಿಲ್ಲಿಸಿ ಹೋಗಿದ್ದ ಮಾರುತಿ ಸುಜುಕಿ 800 ಕಾರು ಹಾಗೂ ಬಾಡಿಗೆ ರಿಕ್ಷಾವೊಂದು ಜಖಂಗೊಂಡಿದೆ. ಎರಡು ವಾಹನಗಳಲ್ಲಿ ಪ್ರಯಾಣಿಕರು ಇಲ್ಲದ ಕಾರಣ ಯಾರಿಗೂ ಅಪಾಯವಾಗಿಲ್ಲ.
ಮರ ಕೈಕುಂಜೆ ರಸ್ತೆಗೆ ಉರುಳಿ ಬಿದ್ದ ಪರಿಣಾಮ ಸಂಚಾರ ಕ್ಕೆ ಅಡಚಣೆಯಾಯಿತು. ಆದರೆ ಸಮಾಜಸೇವಕರಾದ ವಿಜಯಲಕ್ಮೀ ಸಂಸ್ಥೆಯ ಮಾಲೀಕರಾದ ರಾಘವೇಂದ್ರ ನಾಯಕ್ ಅವರು ಕ್ರೇನ್ ಮೂಲಕ ರಸ್ತೆಯಲ್ಲಿ ಅಡ್ಡವಾಗಿ ಬಿದ್ದ ಮರವನ್ನು ಕೆಲವೇ ಗಂಟೆಗಳಲ್ಲಿ ತೆರವು ಮಾಡಿ ಸಾರ್ವಜನಿಕ ರಿಗೆ ಸಂಚಾರಕ್ಕೆ ವ್ಯವಸ್ಥೆ ಮಾಡಿದರು. ಸ್ಥಳಕ್ಕೆ ಟ್ರಾಫಿಕ್ ಎಸ್.ಐ.ಮೂರ್ತಿ ಅವರು ಬೇಟಿ ನೀಡಿ ಸುಗಮ ಸಂಚಾರಕ್ಕೆ ಸಹಕರಿಸಿದರು.