ಉಡುಪಿ, ಜು 15 (DaijiowrldNews/HR): ಕರಾವಳಿ ಕರ್ನಾಟಕದ ಜನಮೆಚ್ಚಿದ ದಾಯ್ಜಿವಲ್ಡ್ ವಾಹಿನಿ ಉಡುಪಿ ಸ್ಟುಡಿಯೋ ವತಿಯಿಂದ ಆಯೋಜಿಸಿರುವ ರಸಪ್ರಶ್ನೆ ಕಾರ್ಯಕ್ರಮ 'ಚಾಣಕ್ಷ ಚಾಲೆಂಜ್' ಸೀಸನ್ 2 ಇದರ ನೋಂದಾವಣೆಗೆ ಇನ್ನು ಕೇವಲ ಮೂರು ದಿನಗಳು ಮಾತ್ರ ಬಾಕಿ ಇವೆ.
ಜುಲೈ 17ರಂದು ತಂಡಗಳನ್ನು ನೋಂದಾಯಿಸಲು ಕೊನೆಯ ದಿನಾಂಕ. ಚಾಣಾಕ್ಷ ಚಾಲೆಂಜ್ ಪ್ರಥಮ ಆವೃತ್ತಿಯಲ್ಲಿ ವಿದ್ಯಾರ್ಥಿ ಮತ್ತು ಸಾರ್ವಜನಿಕರಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದೀಗ ಎರಡನೇ ಆವೃತ್ತಿಯು ಸಂಪೂರ್ಣ ಹೊಸತನದೊಂದಿಗೆ ಮೂಡಿ ಬರಲಿದ್ದು ಈಗಾಗಲೇ ನೋಂದಾವಣೆ ಪ್ರಕ್ರಿಯೆಯು ಅಂತಿಮ ಹಂತದಲ್ಲಿದೆ. ಸಂಪೂರ್ಣ ಕಾರ್ಯಕ್ರಮವು ದಾಯ್ಜಿವಲ್ಡ್ 24*7 ವಾಹಿನಿಯಲ್ಲಿ ಆಗಸ್ಟ್ 2022 ರಿಂದ ಸಂಚಿಕೆಯಾಗಿ ಪ್ರಸಾರಗೊಳ್ಳಲಿದೆ.
ರಸಪ್ರಶ್ನೆ ಕಾರ್ಯಕ್ರಮವು ವಿವಿಧ ಹಂತಗಳಲ್ಲಿ ನಡೆಯಲಿದ್ದು, ರಾಜಕೀಯ, ಸಾಹಿತ್ಯ, ಆರ್ಥಿಕತೆ, ಸಾಮಾನ್ಯ ಜ್ಞಾನ, ಇತಿಹಾಸ, ಕ್ರೀಡೆ ಈ ಮುಂತಾದ ವಿಷಯಗಳ ಕುರಿತಾಗಿ ಪ್ರಶ್ನೆಗಳು ಇರಲಿವೆ.
ಎಲ್ಲಾ ಸಂಚಿಕೆಗಳನ್ನು ದಾಯ್ಜಿವಲ್ಡ್ ಉಡುಪಿ ಸ್ಟುಡಿಯೋದಲ್ಲಿಯೇ ಚಿತ್ರೀಕರಿಸಲಾಗುವುದು.
ಕರಾವಳಿ ಕರ್ನಾಟಕದ ಪ್ರಖ್ಯಾತ ಕಾರ್ಯಕ್ರಮ ನಿರೂಪಕರಾದ ಆಲ್ವಿನ್ ದಾಂತಿ ಪೆರ್ನಾಲ್ ಕ್ವಿಜ್ ಮಾಸ್ಟರ್ ಆಗಿ ಸ್ಪರ್ದೆಯನ್ನು ನಡೆಸಿಕೊಡಲಿದ್ದಾರೆ. ಆಸಕ್ತ ತಂಡಗಳು ಜುಲೈ 17, 2022 ರ ಒಳಗೆ ನೋಂದಾಯಿಸಬೇಕು.
ಸ್ಪರ್ಧೆಯ ನಿಯಮಾವಳಿಗಳು:
1. ಒಂದು ತಂಡದಲ್ಲಿ ಕೇವಲ ಇಬ್ಬರು ಮಾತ್ರ ಭಾಗವಹಿಸಬಹುದು
2. ಪ್ರೌಢಶಾಲೆಯ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ.
3. ತಮ್ಮ ಭಾಗವಹಿಸುವಿಕೆಯನ್ನು, ನಿಖರವಾದ ಮಾಹಿತಿಯೊಂದಿಗೆ ಶೈಕ್ಷಣಿಕ ಸಂಸ್ಥೆಯ ಮುಖ್ಯಸ್ಥರ ಸಹಿ ಹಾಗೂ ಮುದ್ರೆಯೊಂದಿಗೆ ನಮಗೆ ತಲುಪಿಸುವುದು
4. ಸ್ಪರ್ಧಾರ್ಥಿಗಳೊಂದಿಗೆ, ಒಬ್ಬರು ಶಿಕ್ಷಕರು ಇರತಕ್ಕದ್ದು. ಸ್ಪರ್ಧೆಯ ಕುರಿತಾಗಿ ಎಲ್ಲಾ ಮಾಹಿತಿಗಳನ್ನು ಶಿಕ್ಷಕರ ಮೂಲಕವೇ ತಿಳಿಸಲಾಗುವುದು
5. ಭಾಗವಹಿಸುವಿಕೆಯನ್ನುಖಚಿತ ಪಡಿಸುವಕೊನೆಯ ದಿನಾಂಕ ಜುಲೈ 17, 2022
6. ಸ್ಪರ್ಧೆಯು ಸಾಮಾನ್ಯ ಜ್ಞಾನ, ಇತಿಹಾಸ, ಪ್ರಸ್ತುತ ವಿದ್ಯಾಮಾನಗಳು, ರಾಜಕೀಯ, ರಾಷ್ಟ್ರೀಯ ಹಾಗೂ ಅಂತ ರಾಷ್ಟ್ರೀಯ ವಿಷಯಕ್ಕೆ ಸಂಬಂಧ ಪಟ್ಟ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ.
7. ಈ ಕಾರ್ಯಕ್ರಮವು ಸಂಪೂರ್ಣವಾಗಿ ಕನ್ನಡ ಭಾಷೆಯಲ್ಲಿಯೇ ನಡೆಯಲಿದೆ. (ಪ್ರಶ್ನೆಗಳನ್ನು ಕನ್ನಡ ಮತ್ತು ಇಂಗ್ಲೀಷ್ ಎರಡೂ ಭಾಷೆಗಳಲ್ಲಿ ಕೇಳಲಾಗುವುದು)
8. ಸ್ಪರ್ಧಿಗಳ ತಂಡಕ್ಕೆ ಆಯಾ ವಿದ್ಯಾರ್ಥಿಗಳ ಶಾಲೆಯ ಹೆಸರನ್ನು ಇಡಲಾಗುತ್ತದೆ.
9. ಕ್ವಿಜ್ ಮಾಸ್ಟರ್ ನೀಡಿದ ನಿರ್ಣಯವೇ ಅಂತಿಮ.
10. ಕಾರ್ಯಕ್ರಮದಲ್ಲಿನ ಬದಲಾವಣೆ, ಸಮಯ ನಿಗದಿ, ರದ್ದು ಮಾಡುವುದು ಹಾಗೂ ದಿನಾಂಕ ಮುಂದೂಡುವ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಕಾರ್ಯಕ್ರಮ ಸಂಯೋಜಕರಿಗಿರುತ್ತದೆ.
11. ರಸಪ್ರಶ್ನೆಯ ಎಲ್ಲಾ ಸಂಚಿಕೆಯ ರೆಕಾರ್ಡಿಂಗನ್ನು ದಾಯ್ಜಿವಲ್ಡ್ ಉಡುಪಿ ಸ್ಟುಡಿಯೋ ದಲ್ಲಿ ನಡೆಸಲಾಗುವುದು
ವಿಜೇತ ತಂಡಗಳಿಗೆ ಪ್ರಶಸ್ತಿ ಫಲಕ ಮತ್ತು ಪ್ರಮಾಣ ಪತ್ರದ ಜೊತೆಗೆ ಆಕರ್ಷಕ ನಗದು ಬಹುಮಾನ ಕೂಡಾ ನೀಡಲಾಗುವುದು.
ಪ್ರಥಮ ವಿಜೇತ ತಂಡಕ್ಕೆ ರುಪಾಯಿ 15,000, ದ್ವಿತೀಯ ವಿಜೇತ ತಂಡಕ್ಕೆ ರುಪಾಯಿ 10,000 ಮತ್ತು ತೃತೀಯ ವಿಜೇತ
ತಂಡಕ್ಕೆ ರುಪಾಯಿ 5,000 ನಗದು ಬಹುಮಾನ ಗೆಲ್ಲುವ ಅವಕಾಶವಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ದಾಯ್ಜಿವಲ್ಡ್ ಉಡುಪಿ
ಮೂರನೇ ಮಹಡಿ. ಮಾಂಡವಿ ಟ್ರೇಡ್ ಸೆಂಟರ್
ಕಡಿಯಾಳಿ, ಉಡುಪಿ – 576102
ಮೊಬೈಲ್ ಸಂಖ್ಯೆ: +91 73386 37683 / 88, +91 99001 61556
ಈ ಮೈಲ್: daijiworldudupi@gmail.com