ಮಂಗಳೂರು, ಜು 14 (DaijiworldNews/SM): ಫಲ್ಗುಣಿ ತೀರದಲ್ಲಿ ಭಾರೀ ಪ್ರಮಾಣದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ರಾಶಿ ಬಿದ್ದ ಘಟನೆ ನಡೆದಿದ್ದು, ಅರಣ್ಯ ಇಲಾಖೆ ಸ್ವಯಂ ಸೇವಕರು ಜೊತೆಯಾಗಿ ತೆರವು ಕಾರ್ಯಾಕ್ಕೆ ಕೈಜೋಡಿಸಿದ್ದಾರೆ.
ನದಿಯಲ್ಲಿ ಟನ್ ಗಟ್ಟಲೆ ತ್ಯಾಜ್ಯದ ರಾಶಿ ತೇಲಿ ಬಂದಿದೆ. ಕುಳೂರಿನ ನದಿ ತೀರದಲ್ಲಿ ತ್ಯಾಜ್ಯ ಶೇಖರಣೆಗೊಂಡಿತ್ತು. ಇಂದು ಸಂಘಸಂಸ್ಥೆ, ಸ್ವಯಂ ಸೇವಕ ರಿಂದ ಸ್ವಚ್ಛತಾ ಕಾರ್ಯ ನೆರವೇರಿಸಿದ್ದಾರೆ.
ಸ್ವಯಂ ಸೇವಕರು ಸೇರಿಕೊಂಡು ನದಿಯಿಂದ ತ್ಯಾಜ್ಯ ಮೇಲೆತ್ತಿದ್ದಾರೆ. ಇವರ ಕಾರ್ಯಕ್ಕೆ ಮಂಗಳೂರು ರೇಂಜ್ ಅರಣ್ಯ ಇಲಾಖೆ, ಸಿಒಡಿಪಿ, ಎನ್ಇಸಿಎಫ್ ಮೊದಲಾದ ಸಂಘಟನೆಗಳ ಸಹಕಾರ ನೀಡಿವೆ.