ಸುಬ್ರಹ್ಮಣ್ಯ, ಜು 14 (DaijiworldNews/SM): ಸುಳ್ಯ ತಾಲೂಕಿನ ಹರಿಹರ ಪಲ್ಲತ್ತಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬಾರೀ ಮಳೆಗೆ ಸಂಭವಿಸಿರುವ ಮಳೆ ಹಾನಿ ಪ್ರದೇಶಗಳಿಗೆ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್. ಅಂಗಾರ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಾಳುಗೋಡು ಗ್ರಾಮದ ಉಪ್ಪುಕಳದಲ್ಲಿ ಮರದ ಪಾಲ ನೀರುಪಾಲಾಗಿ ಸಮಸ್ಯೆ ಅನುಭವಿಸಿದ ಘಟನಾ ಸ್ಥಳಕ್ಕೆ ಸಚಿವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಉಪ್ಪುಕಳ ಹೊಳೆಗೆ ಶೀಘ್ರ ಸೇತುವೆ ನಿರ್ಮಿಸಲು ಕ್ರಮಕೈಗೊಳ್ಳುವ ಭರವಸೆ ನೀಡಿದರು. ತಾತ್ಕಲಿಕವಾಗಿ ನಿರ್ಮಿಸಲಾದ ಮರದ ಮೇಲೆ ತೆರಳಿ ಸ್ಥಳೀಯರಿಂದ ಮಾಹಿತಿ ಪಡೆದರು.
ಪ್ರಮುಖರಾದ ಹರೀಶ್ ಕಂಜಿಪಿಲಿ, ವೆಂಕಟ್ ದಂಬೆಕೋಡಿ, ಮುಳಿಯ ಕೇಶವ ಭಟ್, ಗ್ರಾ.ಪಂ. ಅಧ್ಯಕ್ಷ ಜಯಂತ್ ಬಾಳುಗೋಡು, ಹಿಮ್ಮತ್ ಕಿರಿಭಾಗ, ಅಂಬಾದಾಸ್, ಮಾದವ ಚಾಂತಾಳ, ರಾಧಕೃಷ್ಣ ಕಟ್ಟೆಮನೆ, ಚಂದ್ರಹಾಸ ಶಿವಾಲ, ಪಿಡಿಒ ಪುರುಷೋತ್ತಮ, ಶಿಲ್ಪಾ ಕೋತ್ನಡ್ಕ, ಬಿಂದು ಗುಂಡಿಹಿತ್ಲು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.