ಮಂಗಳೂರು, ಜು 08 (DaijiworldNews/MS): ವೈದ್ಯಕೀಯ ಉಪಕರಣಗಳ ಸರಬರಾಜು ಮಾಡುವುದಾಗಿ ನಂಬಿಸಿ ಬಳಿಕ ಸರಬರಾಜು ಮಾಡದೆ ವಂಚಿಸಿದ ಆರೋಪದಲ್ಲಿ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವೈದ್ಯಕೀಯ ಉಪಕರಣಗಳ ಮಾರಾಟ ಮತ್ತು ಸೇವೆಯಲ್ಲಿ ತೊಡಗಿಸಿಕೊಂಡಿರುವ ಮುರಳೀಧರ ಶೆಟ್ಟಿ ಎಂಬವರು 2020ರಲ್ಲಿ ಪರಿಚಯವಾಗಿದ್ದ ಆರೋಪಿ ಅಮಿತ್ ಸುರೇಶ್ ಶೇವಾಲೆ ಎಂಬಾತನೊಂದಿಗೆ ವೈದ್ಯಕೀಯ ಉಪಕರಣಗಳ ಸರಬರಾಜಿಗೆ ಒಪ್ಪಂದ ಮಾಡಿಕೊಂಡಿದ್ದರು. ಅಲ್ಲದೆ ಈ ಒಪ್ಪಂದದ ಪ್ರಕಾರ ಸಾಮಾಗ್ರಿ ಸರಬರಾಜು ಮಾಡಲು 12,00,075 ಲಕ್ಷ ರೂ. ನೀಡಿದ್ದರು. ಆದರೆ ಆರೋಪಿಯು ಉಪಕರಣಗಳನ್ನು ತಲುಪಿಸದೆ ವಂಚಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಮಧ್ಯೆ ಮುರಳೀಧರ ಶೆಟ್ಟಿಯು ಪುಣೆಗೆ ಹೋಗಿ ಹಲವು ಬಾರಿ ಆರೋಪಿಯ ಬಳಿ ಮಾತುಕತೆ ನಡೆಸಿದಾಗ ಚೆಕ್ ಗಳು ಗಳನ್ನು ನೀಡಿದ್ದು, ಅವು ಬೌನ್ಸ್ ಆಗಿತ್ತು. ಬಳಿಕ ೨೦೨೧ರಲ್ಲಿ ಮತ್ತೊಂದು ಒಪ್ಪಂದ ಮಾಡಿಕೊಂಡ ಆರೋಪಿಯು ಮತ್ತೆ 15,39,075 ರೂ. ಪಡೆದು ಉಪಕರಣ ನೀಡದೆ ನಂಬಿಕೆಗೆ ದ್ರೋಹ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.