ಉಡುಪಿ, ಜೂ 30 (DaijiworldNews/HR): ಒಬ್ಬ ಕನ್ಹಯ್ಯನ ಬದಲು ಹತ್ತು ಮುಸ್ಲಿಂ ತಲೆಗಳನ್ನು ತರುವ ಧೈರ್ಯ ಹಿಂದೂ ಸಮಾಜಕ್ಕಿದೆ. ಇಬ್ಬರು ಆರೋಪಿಗಳನ್ನು ಸಾರ್ವಜನಿಕರಿಗೆ ಒಪ್ಪಿಸಲಿ, ನಾವು ಅವರಿಗೆ ಶಿಕ್ಷೆ ನೀಡುತ್ತೇವೆ, ಕನ್ಹಯ್ಯ ಅವರ ಸಾವನ್ನು ಹಿಂದೂ ಜಾಗರಣಾ ವೇದಿಕೆ ಖಂಡಿಸುವುದಿಲ್ಲ, ಏಕೆಂದರೆ ಅವರು ಹಿಂದೂ ಸಮಾಜವನ್ನು ಎಚ್ಚರಗೊಳಿಸಲು ಹುತಾತ್ಮರಾಗಿದ್ದಾರೆ ಎಂದು ವಲಯ ಸಹ ಸಂಯೋಜಕ ಸತೀಶ್ ದಾವಣಗೆರೆ ಹೇಳಿದ್ದಾರೆ.
ಉದಯಪುರದಲ್ಲಿ ಕನ್ಹಯ್ಯಾಲಾಲ್ನನ್ನು ಬರ್ಬರವಾಗಿ ಹತ್ಯೆಗೈದಿರುವುದನ್ನು ವಿರೋಧಿಸಿ ಅಜ್ಜರಕಾಡಿನ ಹುತಾತ್ಮರ ಸ್ಮಾರಕ ಮೈದಾನದಲ್ಲಿ ಹಿಂದೂ ಜಾಗರಣ ವೇದಿಕೆಯು ಗುರುವಾರದಂದು ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಮನೆಯಲ್ಲಿ ಪೂಜೆ, ಹೋಮ ಮಾಡುವ ಬದಲು ಆಯುಧಗಳು, ಖಡ್ಗಗಳನ್ನು ಪೂಜಾ ಸ್ಥಳದಲ್ಲಿ ಇಟ್ಟು ಪೂಜೆ ಸಲ್ಲಿಸುವ ಪದ್ಧತಿಯನ್ನು ಆರಂಭಿಸೋಣ. ಮತ್ತೆ ಕ್ಷಾತ್ರ ಪರಂಪರೆಗೆ ಬರೋಣ. ಕ್ಷಾತ್ರವು ಭಾರತದ ಅತ್ಯಂತ ಹಳೆಯ ಪರಂಪರೆಯಾಗಿದೆ. ಹೆಚ್ಚಿನ ದೇಶಗಳು ಬಲವಂತವಾಗಿ ಮುಸ್ಲಿಂ ರಾಷ್ಟ್ರವಾಗಿ ಪರಿವರ್ತನೆಗೊಂಡವು. ಆದರೆ "ಅಖಂಡ ಭಾರತಃ" ಕನಸು ಕಾಣುವ ಜಗತ್ತಿನ ಏಕೈಕ ದೇಶ ಭಾರತ ಎಂದಿದ್ದಾರೆ.
ಇಂದು ನೂಪುರ್ ಶರ್ಮಾ ಅವರನ್ನು ಬೆಂಬಲಿಸುವ ಸಂದೇಶವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಕ್ಕಾಗಿ ಅಮಾಯಕ ಟೈಲರ್ ಕನ್ಹಯ್ಯ ಲಾಲ್ ಅವರನ್ನು ಕೊಲ್ಲಲಾಯಿತು. ಮುಂದಿನ ದಿನಗಳಲ್ಲಿ ಇಂತಹ ಹಿಂಸಾಚಾರಕ್ಕೆ ಸಂಬಂಧವಿಲ್ಲದ ಇತರ ಬಡವರು ಅಥವಾ ಸಾಮಾನ್ಯರು, ಮುಗ್ಧ ಸಾರ್ವಜನಿಕರು ಬಲಿಯಾಗಬಹುದು. ಹಿಂದೂ ಸಮಾಜವು ಎಂದಿಗೂ ಸಾವಿಗೆ ಹೆದರುವುದಿಲ್ಲ. ನಾವು ಹಿಂದೂ ಸಮಾಜದ ರಕ್ಷಣೆಗಾಗಿ ಹೋರಾಡಲು ಸಿದ್ಧರಿದ್ದೇವೆ. ಇಸ್ಲಾಂ ಎಂದಿಗೂ ಸತ್ಯಕ್ಕೆ ತಲೆಬಾಗುವುದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಈ ವೇಳೆ ಯಶ್ಪಾಲ್ ಸುವರ್ಣ, ವಲಯ ಸಹ ಸಂಚಾಲಕ ಪ್ರಕಾಶ್ ಕುಕ್ಕೆವಳ್ಳಿ, ವಿಭಾಗ ಸಹ ಸಂಚಾಲಕ ಮಹೇಶ್ ಬೈಲೂರು, ಹೆಬ್ರಿ, ಮಹಿಳಾ ಜಾಗರಣ ಪ್ರಾಂತ ಸಂಯೋಜಕ ಉಮೇಶ್ ನಾಯ್ಕ್ ಸೂದಾ, ಜಿಲ್ಲಾ ಸಂಯೋಜಕ ಪ್ರಕಾಶ್ ಮಲ್ಪೆ, ವೀಣಾ ಶೆಟ್ಟಿ, ರಮಿತಾ ಶೈಲೇಂದ್ರ ಮತ್ತಿತರರು ಉಪಸ್ಥಿತರಿದ್ದರು.