ಕಾರ್ಕಳ, ಜೂ 29 (DaijiworldNews/DB): ರಾಜಸ್ಥಾನ ಉದಯಪುರದ ಟೈಲರ್ ಕನ್ನಯ್ಯ ಲಾಲ್ ಎಂಬವರ ಶಿರೆಚ್ಛೇದನವೆಸಗಿ ಕೊಲೆಗೈದಿರುವ ಕೃತ್ಯವು ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿದೆ. ವಿಶ್ವದ ಕೆಲ ರಾಷ್ಟ್ರಗಳಲ್ಲಿ ತಲೆದೋರಿದ್ದ ಜಿಹಾದ್ ಸಂಸ್ಕೃತಿಯ ಪ್ರಯೋಗವು ರಾಜಸ್ಥಾನದಲ್ಲಿ ನಡೆದಿದ್ದು, ಆರಂಭದ ಹಂತದಲ್ಲಿ ಕೃತ್ಯದಲ್ಲಿ ತೊಡಗಿಸಿಕೊಂಡಿರುವ ಭಯೋತ್ಪಾದಕರಿಗೆ ಎನ್ಕೌಂಟರ್ನಿಂದಲೇ ಪ್ರತ್ಯುತ್ತರ ನೀಡಬೇಕು ಎಂದು ಕಾರ್ಕಳ ಬಿಜೆಪಿ ಪ್ರ.ಕಾರ್ಯದರ್ಶಿ ನವೀನ್ ನಾಯಕ್ ಆಗ್ರಹಿಸಿದ್ದಾರೆ.
ರಾಜಸ್ಥಾನದ ಉದಯಪುರದಲ್ಲಿ ಹೇಯ ಕೃತ್ಯ ಎಸಗಿದ ಮತಾಂಧ ಶಕ್ತಿಗಳ ವಿರುದ್ಧ ಬಿಜೆಪಿ ಯುವ ಮೋರ್ಚಾ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಅವರು ಬುಧವಾರ ಮಾತನಾಡಿದರು.
ಕಾಶ್ಮಿರದಲ್ಲಿ ಹಿಂದೂಗಳ ಹತ್ಯೆ, ಬಳಿಕ ದೇಶದ ವಿವಿದೆಡೆ, ಅನಂತರದಲ್ಲಿ ನಮ್ಮದೆ ರಾಜ್ಯದಲ್ಲಿ ಮತಾಂಧ ಶಕ್ತಿಗಳ ಅಟ್ಟಹಾಸ ಮರೆಯುತ್ತಿದ್ದಾರೆ. ಶಿವಮೊಗ್ಗ ಘಟನೆಯಲ್ಲಿ ಕಲ್ಲಂಗಡಿ ಒಡೆದು ಹಾಕಿರುವುದಕ್ಕೆ ಇಡೀ ಕಾಂಗ್ರೆಸ್, ಬುದ್ದಿಜೀವಿಗಳು ಹೇಳಿಕೆ ಕೊಟ್ಟಿದ್ದವರು. ರಾಜಸ್ಥಾನದಲ್ಲಿ ಘಟನೆ ನಡೆದು 24 ತಾಸುಗಳಾಗಿದ್ದರೂ ಚಕಾರ ಎತ್ತುತಿಲ್ಲ. ಖಂಡಿಸುವ ಕಾರ್ಯ ನಡೆಸುತಿಲ್ಲ. ಇಂತಹ ರಾಕ್ಷಸರನ್ನು ಯಾವುದೇ ಕಾರಣಕ್ಕೂ ಕ್ಷಮಿಸಬಾರದು ಎಂದವರು ಒತ್ತಾಯಿಸಿದರು.
ಕೃತ್ಯ ಎಸಗಿ ಆ ದೃಶ್ಯಾವಳಿಯನ್ನು ಜಾತಾಣದಲ್ಲಿ ಹರಿಬಿಟ್ಟು ಕೃತ್ಯವನ್ನು ಸಮರ್ಥಿಸಿಕೊಂಡಿರುವುದು ಹಾಗೂ ಪ್ರಧಾನಿ ನರೇಂದ್ರ ಮೋದಿ ಹತ್ಯೆ ಬೆದರಿಕೆ ಕುರಿತು ಉಲ್ಲೇಖಿಸಿರುವುದು ಘೋರ ಕೃತ್ಯವಾಗಿದೆ ಎಂದರು.
ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ವಿಖ್ಯಾತ್ ಶೆಟ್ಟಿ ಮಾತನಾಡಿದರು. ಪ್ರಕಾಶ್ ರಾವ್, ಮುಟ್ಲುಪ್ಪಾಡಿ ಸುಹಾಸ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.