ವಿಟ್ಲ, ಜೂ 29 (DaijiworldNews/MS): ವಿಟ್ಲ-ಕಬಕ ರಸ್ತೆಯ ಬದನಾಜೆ ಬಸ್ ನಿಲ್ದಾಣದ ಒಳ ಭಾಗದಲ್ಲಿ ಬುಧವಾರ ಬೆಳಗ್ಗೆ ರಕ್ತದ ಕಲೆಗಳು ,ತಲೆಯ ಭಾಗದ ತುಣುಕು ಕಂಡು ಬಂದಿದ್ದರಿಂದ ಸ್ಥಳೀಯರು ಭಯಭೀತರಾಗಿದ್ದಾರೆ.
ಬಸ್ ನಿಲ್ದಾಣದಲ್ಲಿ ಯಾರಾದರೂ ಕೊಲೆಯಾಗಿದ್ದಾರೆ ಅಥವಾ ಅಪಘಾತದಲ್ಲಿ ಗಾಯಗೊಂಡಿದ್ದಾರೆಯೇ? ಬಸ್ ನಿಲ್ದಾಣದಲ್ಲಿ ವಿಶ್ರಾಂತಿ ಪಡೆದ ನಂತರ ಆಸ್ಪತ್ರೆಗೆ ಮರಳಿದ್ದಾರೆ? ಹೀಗಾಗಿ ಅಲ್ಲಿ ರಕ್ತ ಹರಿದಿದೆಯೇ ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ.
ವಿಟ್ಲ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ತನಿಖೆಯ ನಂತರವಷ್ಟೇ ಸತ್ಯಾಂಶ ಬೆಳಕಿಗೆ ಬರಲಿದೆ.