ಮಂಗಳೂರು, ಜೂ 28 (DaijiworldNews/SM): ಸುರತ್ಕಲ್ ಠಾಣಾ ವ್ಯಾಪ್ತಿಯ ಕೃಷ್ಣಾಪುರದಲ್ಲಿ ಬಾಲಕನ ಮೇಲೆ ನಡೆದ ಹಲ್ಲೆಗೆ ಮಾಜಿ ಶಾಸಕ ಮೊಯಿದ್ದೀನ್ ಬಾವ ಖಂಡಿಸಿದ್ದಾರೆ. ಈ ರೀತಿಯ ಕೃತ್ಯಗಳು ಸಮಾಜದಲ್ಲಿ ಒಡಕು ಸೃಷ್ಟಿಗೆ ಕಾರಣ ಆಗ್ತಾ ಇದೆ. ಪುಟ್ಟ ಬಾಲಕನ ಮೇಲೆ ನಡೆಸಿದ ಹಲ್ಲೆ ಅಮಾನವೀಯ ಕೃತ್ಯ ಇದನ್ನು ಖಂಡಿಸುತ್ತೇನೆ ಎಂದು ಮೊಯ್ದಿನ್ ಬಾವಾ ಹೇಳಿದ್ದಾರೆ.
ಈ ಬಗ್ಗೆ ಪೊಲೀಸ್ ಇಲಾಖೆಗೂ ಮನವಿ ಮಾಡ್ತೇನೆ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಆಗ್ರಹಿಸುತ್ತೇನೆ. ಸಮಾಜದಲ್ಲಿ ಎಲ್ಲರೂ ಶಾಂತಿ ಸೌಹಾರ್ದತೆಯಿಂದ ಬದುಕಬೇಕಿದೆ. ಈ ಭಾಗದಲ್ಲಿ ಚುನಾವಣೆ ಹತ್ತಿರವಾಗುತ್ತಿದ್ದಂತೆ ಈ ರೀತಿಯ ಕೃತ್ಯಗಳು ನಡೆಯುತ್ತೇನೆ. ಇದು ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರಳಿದೆ. ಈ ಬಗ್ಗೆ ಪೊಲೀಸ್ ಇಲಾಖೆ ಎಚ್ಚೆತ್ತು ಈ ಕೃತ್ಯಗಳಿಗೆ ಕಡಿವಾಣ ಹಾಕಬೇಕಿದೆ ಎಂದರು.
ಸೋಮವಾರ ರಾತ್ರಿ ಮದರಸದಿಂದ ಮರಳುತ್ತಿದ್ದ ಬಾಲಕನಿಗೆ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳ ತಂಡ ಹಲ್ಲೆ ನಡೆಸಿ ಪರಾರಿಯಾಗಿತ್ತು. ಸುರತ್ಕಲ್ ನ ಕೃಷ್ಣಾಪುರದಲ್ಲಿ ಘಟನೆ ನಡೆದಿತ್ತು.