ಬೆಳ್ಮಣ್, ಮೇ 21 (DaijiworldNews/HR): ರಸ್ತೆ ನಿರ್ಮಾಣ ಕಾಮಗಾರಿಗೆಂದು ರಸ್ತೆಯನ್ನು ಸಂಪೂರ್ಣ ಅಗೆದು ಹಾಕಿರುವ ಪರಿಣಾಮ ರಸ್ತೆಯಲ್ಲಿ ವಾಹನವಲ್ಲ ಕಾಲು ನಡಿಗೆಯಲ್ಲೂ ಸಂಚರಿಸುವುದೇ ಅಸಾಧ್ಯವಾಗಿದೆ.
ನಂದಳಿಕೆ ಗ್ರಾಮದ ಬೋರ್ಡು ಶಾಲೆಯಿಂದ ಕೊಪ್ಪಳ ಪಡುಬೆಬೆಟ್ಟು ಮಾರ್ಗವಾಗಿ ನಂದಳಿಕೆ ನೆಲ್ಲಿಗುಡ್ಡೆ ಪರಿಸರವನ್ನು ಸಂಪರ್ಕಿಸುವ ರಸ್ತೆಯ ಕಾಮಗಾರಿಗಾಗಿ ರಸ್ತೆಯನ್ನು ಸಂಪೂರ್ಣ ಅಗೆದು ಹಾಕಿದ್ದು ಇದೀಗ ನಿರಂತರ ಮಳೆಯಿಂದಾಗಿ ಈ ಭಾಗದ ಅತ್ತಿತ್ತ ಸಾಗಲು ಅಸಾಧ್ಯವಾಗುತ್ತಿದೆ. ಇಲ್ಲಿನ ರಸ್ತೆಯಲ್ಲಿ ಹೆಚ್ಚಾಗಿ ಘನ ವಾಹನಗಳು ಸಂಚರಿಸುವುದರಿಂದ ಅಗೆದು ಹಾಕಿದ ಮಣ್ಣಿನ ರಸ್ತೆ ಇದೀಗ ಸಂಪೂರ್ಣ ಕೆಸರು ಗದ್ದೆಯಾಗಿದೆ ಮಾರ್ಪಟ್ಟಿದೆ.
ರಸ್ತೆ ಕಾಮಗಾಗಿ ಆರಂಭಿಸಿ ಸುಮಾರು ಮೂರು ನಾಲ್ಕು ತಿಂಗಳು ಕಳೆದರೂ ನಿಧಾನಗತಿಯ ರಸ್ತೆಯ ಕಾಮಗಾರಿಯಿಂದ ಈ ರೀತಿಯಾದ ಪರಿಸ್ಥಿತಿ ನಿರ್ಮಣಗೊಂಡಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಮಳೆಗಾಲ ಸನಿಹವಾಅಗುತ್ತಿದ್ದರೂ ರಸ್ತೆಯನ್ನು ಸಂಪೂರ್ಣ ಅಗೆದು ಹಾಕಿ ಈ ಭಾಗನ ಜನೆತೆಗೆ ಸಮಸ್ಯೆಯನ್ನು ತಂದೊಡ್ಡಿದ್ದಾರೆ. ಅಗೆದು ಹಾಕಿ ಮೂರು ತಿಂಗಳು ಹೆಚ್ಚು ಕಳೆದಿದ್ದು ಇಲ್ಲಿಯವರೆಗೂ ಒಂದು ಜಲ್ಲಿಯನ್ನು ಹಾಕುವಲ್ಲಿ ಗುತ್ತಿಗೆದಾರ ಮನಸ್ಸು ಮಾಡಿಲ್ಲ. ಸಂಪೂರ್ಣ ಕೆಸರುಮಯ ರಸ್ತೆಯಲ್ಲಿಯೇ ಶಾಲಾ ಮಕ್ಕಳು ಕಾಲು ನಡಿಗೆಯಲ್ಲಿ ಸಾಗುವಂತಾಗಿದೆ.
ಕಾಮಗಾರಿಯು ನಿಧಾನಗತಿಯಿಂದ ಸಾಗುತ್ತಿರುವ ಹಿನ್ನಲೆಯಲ್ಲಿ ಈ ರಸ್ತೆಯೂ ಸಂಪೂರ್ಣ ಹದಗೆಟ್ಟಿದೆ. ಈ ಭಾಗದಲ್ಲಿ ಹಲವಾರು ಜಲ್ಲಿ ಕಲ್ಲಿನ ಕೋರೆ, ಕ್ರಷರ್ಗಳು ಇರುವುದರಿಂದ ಪ್ರತೀ ನಿತ್ಯ ನೂರಾರು ಘನ ವಾಹನಗಳು ಇದೇ ರಸ್ತೆಯಲ್ಲಿ ಸಂಚರಿಸುತ್ತಿದ್ದು ಘನ ವಾಹನದ ಆರ್ಭಟಕ್ಕೆ ಮಣ್ಣಿನ ರಸ್ತೆಯೂ ಸಂಪೂರ್ಣ ಚಿಂದಿಯಾಗಿದೆ. ಮಳೆಗಾಲದ ನಿರಂತರ ಮಳೆಯಿಂದಾಗಿ ರಸ್ತೆಯೂ ಇದೀಗ ಕೆಸರುಗದ್ದೆಯಾಗಿದೆ. ಅನುದಾನ ಮಂಜೂರುಗೊಂಡು ಹಲವು ದಿನಗಳು ಕಳೆದರೂ ಮಳೆಗಾಲಕ್ಕೂ ಮುನ್ನ ಕಾಮಗಾರಿಯನ್ನು ನಡೆಸಬೇಕಾಗಿದ್ದ ಗುತ್ತಿಗೆದಾರ ನಿಧನ ಕಾಮರಿಯನ್ನು ನಡೆಸಿರುವ ಹಿನ್ನಲೆಯಲ್ಲಿ ಪಡುಬೆಟ್ಟು ಭಾಗದ ಗ್ರಾಮಸ್ಥರು ಸಂಕಟ ಅನುಭವಿಸುವಂತಾಗಿದೆ.
ಕೆಸರುಮಯ ರಸ್ತೆಯಲ್ಲಿ ಸಣ್ಣಪುಟ್ಟ ಬೈಕ್ ಸವಾರು ಕೆಸರು ರಸ್ತೆಯಲ್ಲಿ ವಾಹನ ಸಾಗಿಸಲು ಕಷ್ಟ ಪಡುತ್ತಿದ್ದು ಸಾಅಕಷ್ಟು ಬೈಕ್ ಸವಾರರು ಬಿದ್ದೆದ್ದ ಘಟನೆ ಈಗಾಗಲೇ ಹಲವಾರು ನಡೆದಿದೆ. ಅಲ್ಲದೆ ಘನ ವಾಹನ ಟಿಪ್ಪರ್ಗಳು ನಡೆಸಲು ಅಸಾಧ್ಯವಾಗಿದ್ದು ವಾಹನಗಳು ಜಾರುವುದರಿಂದ ಸಂಚಾರ ನಡೆಸುವುದೇ ಅಸಾಧ್ಯವಾಗಿದೆ.
ರಸ್ತೆಯೂ ಸಂಪೂರ್ಣ ಕೆಸರಿನಿಂದ ಕೂಡಿದ್ದು ಈ ಭಾಗದ ಜನರಿಗೆ ಸಂಚಾರಕ್ಕೆ ತೊಂದರೆಯಾಗುತ್ತಿದ್ದು ಕೂಡಲೇ ರಸ್ತೆಗೆ ಜಲ್ಲಿಯನ್ನು ಹಾಕಿ ತಕ್ಕ ಮಟ್ಟಿಗೆ ಅತ್ತಿತ್ತ ಓಡಾಡು ಅವಕಾಶವನ್ನು ಮಾಡಿಕೊಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.