ಕೊಲ್ಲೂರು, ಮೇ 21 (DaijiworldNews/MS): ಬೈಂದೂರು ತಾಲೂಕು ರಚನೆಗೊಂಡು 5 ವರ್ಷ ಕಳೆದರೂ ಇನ್ನೂ ಒಂದು ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಆಗಿಲ್ಲ ಎಂದು ಸರಕಾರ ಹಾಗೂ ಸ್ಥಳೀಯ ಬೈಂದೂರು ಕ್ಷೇತ್ರದ ಶಾಸಕರನ್ನು ಗಮನ ಸೆಳೆಯಲು ಈ ಭಾಗದ ವಸ್ರೆ, ಅರೇಶಿ ರೂರು, ಗೊಳಿ ಹೊಳೆ ಗ್ರಾಮೀಣ ಪ್ರದೇಶ ವಿಧ್ಯಾರ್ಥಿಗಳು ಅಂಚೆ ಕಾರ್ಡ್ ಅಭಿಯಾನ ಮೂಲಕ ಮನವಿ ಮಾಡಿದ್ದಾರೆ.
ಬೈಂದೂರು ಪಟ್ಟಣ ಪಂಚಾಯತ್, ಕೋರ್ಟ್, ತಾಲೂಕು ಆಫೀಸ್ ಮುಂತಾದ ಕೆಲವು ಸರಕಾರಿ ಕಚೇರಿ ಹೊಂದಿದೆ. ಈ ಗ್ರಾಮಾಂತರ ಜನರಿಗೆ ಬೈಂದೂರು ಕೇವಲ 15 ರಿಂದ 20 ಕಿಲೋಮೀಟರ್ ದೂರದಲ್ಲಿದೆ.ಬೈಂದೂರಿನಲ್ಲಿ ಶಾಸಕರು ಸರಕಾರ ದ ಮೇಲೆ ಒತ್ತಡ ಹಾಕಿ ಒಂದು ತಾಲೂಕು ಮಟ್ಟದ ಸರಕಾರಿ ಆಸ್ಪತ್ರೆ ಮಂಜೂರು ಮಾಡಿಸಿದರೆ ತಾಲೂಕು ವ್ಯಾಪ್ತಿ ಕೊಲ್ಲೂರು ಹಲ್ಕಲ್, ಜಡ್ಕಲ್ ಮುದೂರಿನಿಂದ, ಬೈಂದೂರುವರೆಗಿನ ಜನರಿಗೆ ಅನುಕೂಲವಾಗುತ್ತದೆ.
ಆದರೆ ಸರಕಾರ ಬೈಂದೂರು ತಾಲೂಕಿನಲ್ಲಿ ಸುಸಜ್ಜಿತ ಆಸ್ಪತ್ರೆ ಮಂಜೂರು ಮಾಡಲು ಹಿಂದೇಟು ಹಾಕುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಮುಂದಿನ ಚುನಾವಣೆ ಒಳಗೆ ಸುಸಜ್ಜಿತ ನೂರು ಹಾಸಿಗೆ ಸರಕಾರಿ ಆಸ್ಪತ್ರೆ ಮಂಜೂರು ಮಾಡುವಂತೆ ಬೈಂದೂರು ಗ್ರಾಮೀಣ ಪ್ರದೇಶ ದ ಜನ ಒತ್ತಾಯಿಸುತ್ತಿದ್ದಾರೆ.
ಬೈಂದೂರಿನಲ್ಲಿ ಸಮುದಾಯ ಆರೋಗ್ಯ ಕೇಂದ್ರ ಇದ್ದು ಈ ಆರೋಗ್ಯ ಕೇಂದ್ರ ವನ್ನು ತಾಲೂಕು ಮಟ್ಟದ ನೂರು ಹಾಸಿಗೆ ಸರಕಾರಿ ಆಸ್ಪತ್ರೆ ಆಗಿ ಮೇಲ್ದರ್ಜೆಗೆ ಏರಿಸಲು ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು. ಈ ಬಾರಿ ರಾಜ್ಯ ಬಜೆಟ್ ನಲ್ಲಿ ನೂರು ಹಾಸಿಗೆ ಸರಕಾರಿ ಆಸ್ಪತ್ರೆ ಮಂಜೂರು ಆಗದೇ ಇರುವುದು ಅತ್ಯಂತ ಖೇದಕರ ಸಂಗತಿಯಾಗಿದೆ ಎಂದು ಬೈಂದೂರು ಹಿತರಕ್ಷಣೆ ವೇದಿಕೆ ಅಧ್ಯಕ್ಷ ಜಗದೀಶ್ ಪಟವಾಲ್ ಒತ್ತಾಯಿಸಿದ್ದಾರೆ.