ಮಂಗಳೂರು, ಮೇ 19 (DaijiworldNews/SM): ದ.ಕ. ಜಿಲ್ಲೆಯಲ್ಲಿ ಭಾರೀ ಮಳೆ ಸುರಿದಿರುವ ಕಾರಣದಿಂದಾಗಿ ಗುರುವಾರದಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ರಜೆ ಘೋಷಣೆ ಮಾಡಿದ್ದರು. ಆದರೆ, ಶುಕ್ರವಾರದ ಬಗ್ಗೆ ನಾಳೇ ಬೆಳಗ್ಗೆಯೇ ನಿರ್ಧಾರ ಪ್ರಕಟವಾಗಲಿದೆ.
ನಾಳೆಯೂ ರಜೆ ಇದೆಯೇ ಎಂಬುವುದಾಗಿ ಹಲವು ಮಂದಿ ಪೋಷಕರು ಪ್ರಶ್ನಿಸುತ್ತಿದ್ದಾರೆ. ಅಲ್ಲದೆ, ಗುರುವಾರದಂದು ಬೆಳಗ್ಗೆ ರಜೆ ಘೋಷಣೆ ಮಾಡಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆ ಶುಕ್ರವಾರವೂ ರಜೆ ಇರಬಹುದೆಂದು ಕೆಲವರು ಪ್ರಶ್ನಿಸುತ್ತಿದ್ದಾರೆ.
ಈ ಹಿನ್ನೆಲೆ ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ಪ್ರತಿಕ್ರಿಯೆ ನೀಡಿದ್ದು, ಆಯಾ ತಾಲೂಕುಗಳ ಪರಿಸ್ಥಿತಿ ಗಮನಿಸಿ ನಿರ್ಧಾರವನ್ನು ಕೈಗೊಳ್ಳಲಾಗುವುದು. ತಾಲೂಕುಗಳಲ್ಲಿ ಮಳೆಯ ಪ್ರಮಾಣ ಹೆಚ್ಚಿದ್ದರೆ ರಜೆ ಘೋಷಿಸಲಾಗುವುದೆಂದು ಅವರು ಸ್ಪಷ್ಟಪಡಿಸಿದ್ದಾರೆ.