ಕಾಸರಗೋಡು, ಮೇ 18 (DaijiworldNews/SM): ಕೆರೆಯಲ್ಲಿ ಮುಳುಗಿ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟ ಘಟನೆ ಬುಧವಾರ ಸಂಜೆ ಪೆರಿಯ ಸಮೀಪದ ಚೆರ್ಕಪ್ಪಾರದಲ್ಲಿ ನಡೆದಿದೆ. ದಿಲ್ ಜಿತ್(14) ಮತ್ತು ನಂದ ಗೋಪಾಲ್(14) ಮೃತಪಟ್ಟವರು.
ಇಬ್ಬರು 9ನೇ ತರಗತಿ ವಿದ್ಯಾರ್ಥಿಗಳಾಗಿದ್ದಾರೆ. ಬಾಲಕರು ಬುಧವಾರ ಸಂಜೆ 5 ಗಂಟೆ ಸುಮಾರಿಗೆ ಘಟನೆ ನಡೆದಿದೆ ಚೆರ್ಕಪ್ಪಾರ ಶಾಲಾ ಸಮೀಪದ ಕೆರೆಗೆ ಸಹಪಾಠಿಗಳ ಜೊತೆ ಸ್ನಾನಕ್ಕಿಳಿದಿದ್ದರು. ಆರು ಮಂದಿ ಕೆರೆಗೆ ಇಳಿದಿದ್ದರು. ಈ ಪೈಕಿ ಇಬ್ಬರು ಕೆಸರಿನಲ್ಲಿ ಸಿಲುಕಿದ್ದು ಮೇಲೆ ಬರಲಾರದೆ ನೀರಿನಲ್ಲಿ ಮುಳುಗಿದ್ದರು.
ಬೊಬ್ಬೆ ಕೇಳಿ ಪರಿಸರವಾಸಿಗಳು ಹಾಗೂ ಸುದ್ದಿ ತಿಳಿದು ಕಾಸರಗೋಡಿನಿಂದ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಶೋಧ ನಡೆಸಿ ಇಬ್ಬರನ್ನು ಮೇಲಕ್ಕೆತ್ತಿ ಜಿಲ್ಲಾಸ್ಪತ್ರೆಗೆ ತಲುಪಿದರೂ ಆಗಲೇ ಮೃತ ಪಟ್ಟಿದ್ದರು. ಮೃತದೇಹವನ್ನು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ.