ಮಂಗಳೂರು, ಮೇ 17 (DaijiworldNews/SM): ನಗರದ ಶ್ರೀ ದೇವಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜು ಕ್ಯಾಂಪಸ್ನಲ್ಲಿ ಬಿಇ, ಎಂಬಿಎ, ಎಂಸಿಎ, ಎಂಟೆಕ್ ಹಳೆವಿದ್ಯಾರ್ಥಿಗಳ ಸಂಘದ ಸಮ್ಮಿಲನ ಮೇ 15ರಂದು ಕಾಲೇಜಿನಲ್ಲಿ ಆಯೋಜಿಸಲಾಗಿತ್ತು.
ಎಸ್ಡಿಐಟಿ ಹಳೆವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ಡಾ. ಕೆ.ಇ. ಪ್ರಕಾಶ್, ವಿವಿಧ ವಿಭಾಗಗಳ ಮುಖ್ಯಸ್ಥರು ದೀಪ ಬೆಳಗಿಸಿ ಹಳೆ ವಿದ್ಯಾರ್ಥಿಗಳ ಸಭೆಯನ್ನು ಉದ್ಘಾಟಿಸಿದರು. ಉದ್ಘಾಟನಾ ಸಮಾರಂಭದ ನಂತರ ಎಂಬಿಎ ವಿಭಾಗದ ಎಚ್ಒಡಿ ಡಾ. ಗಾಯತ್ರಿ ಬಿ ಜೆ ಸ್ವಾಗತಿಸಿದರು. ಎಸ್ ಡಿಐಟಿ ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾದ ವಿಶ್ವಾಸ್ ವಿ ಅಮೀನ್ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಎಸ್ಡಿಐಟಿಎಎ ಕೋಶಾಧಿಕಾರಿ ಪ್ರೊ.ಸುಶ್ಮಿತಾ ಎಸ್ ಶೆಟ್ಟಿ ವಂದಿಸಿದರು.
ಔಪಚಾರಿಕ ಕಾರ್ಯಕ್ರಮದ ನಂತರ ಎಂಬಿಎ ವಿದ್ಯಾರ್ಥಿಗಳಾದ ಅಥಿರಾ, ಅನುಶ್ರೀ, ಧೀರಜ್, ತಾಶಿ, ದೇವಿಕಾ, ನಮಿತಾ, ವಿಬಿನ್ ಅವರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಇದೇ ವೇಳೆ ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ವಿಶ್ವಾಸ್ ವಿ ಅಮೀನ್, ಉಪಾಧ್ಯಕ್ಷರಾಗಿ ಜಿತೇಂದ್ರ ಭಟ್ ಮತ್ತು ಮಹಮ್ಮದ್ ಅಜ್ಮಲ್, ಕಾರ್ಯದರ್ಶಿಯಾಗಿ ಸಾಕ್ಷಾತ್ ಶೆಟ್ಟಿ, ಜಂಟಿ ಕಾರ್ಯದರ್ಶಿಯಾಗಿ ಶ್ರೀಮತಿ ಸಂಜನಾ ಮತ್ತು ಖಜಾಂಚಿಯಾಗಿ ಶ್ರೀಮತಿ ಸುಶ್ಮಿತಾ ಎಸ್ ಶೆಟ್ಟಿ ಅವರನ್ನು ಆಯ್ಕೆ ಮಾಡಲಾಗಿದೆ. ಅಮೃತಾ ಕೆ.ವಿ. ಅವರು ಕಾರ್ಯಕ್ರಮ ನಿರೂಪಿಸಿದರು.